ಶಿಕ್ಷಕರ ವರ್ಗಾವಣೆಯ ಮೊದಲ ದಿನವೇ ಕೌನ್ಸಲಿಂಗ್ ನಲ್ಲಿ ಗದ್ದಲ ಮೂರ್ಛೆ ಹೋಗಿ ಬಿದ್ದ ಶಿಕ್ಷಕ ಆಗಿದ್ದಾದರೂ ಏನು…..

Suddi Sante Desk

ಧಾರವಾಡ –

ಶಿಕ್ಷಕರ ವರ್ಗಾವಣೆಯ ಕೌನ್ಸೆಲಿಂಗ್ ಗೊಂದಲ ಗದ್ದಲ ಗಲಾಟೆ ನಡೆದ ಘಟನೆ ಧಾರವಾಡದಲ್ಲಿ ನಡೆದಿದೆ. ಹೌದು ನಗರದಲ್ಲಿ ಇಂದಿನಿಂದ ಆರಂಭಗೊಂಡ ಮೊದಲ ದಿನದ ಕೌನ್ಸ್ ಲಿಂಗ್ ನ ವೇಳೆಯಲ್ಲಿ ಗದ್ದಲವಾಗಿದೆ.ಧಾರವಾಡದ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಇಂದಿನಿಂದ ಕೌನ್ಸಲಿಂಗ್ ನಡೆಯುತ್ತಿದ್ದು ಈ ಒಂದು ಕೌನ್ಸೆಲಿಂಗ್ ನಲ್ಲಿ ಮೊದಲನೇ ಯ ದಿನವೇ ಗಲಾಟೆಯಾಗಿದೆ.

13 ಮುಖ್ಯ ಶಿಕ್ಷಕ, 97 ಸಹ ಶಿಕ್ಷಕರ ವರ್ಗಾವಣೆಯ ಕೌನ್ಸೆಲಿಂಗ್ ನಡೆಯುತ್ತಿದೆ.ಸರಿಯಾಗಿ ಕೌನ್ಸ್ ಲಿಂಗ್ ನಡೆಯುತ್ತಿಲ್ಲವೆಂಬ ಆರೋಪ ಜೊತೆಗೆ 25 ರ ಸ್ಥಾನದಲ್ಲಿ 15 ಸ್ಥಳ ಮಾತ್ರ ತೋರಿಸಲಾಗಿದೆ ಅನ್ನೋ ಆರೋಪ ಕೇಳಿ ಬಂದಿದೆ.

ಶಿಕ್ಷಕರಿಂದ ಅಧಿಕಾರಿಗಳ ಮೇಲೆ ಆರೋಪವನ್ನು ಮಾಡ ಲಾಗಿದೆ.ಕೌನ್ಲೆಲಿಂಗ್ ವೇಳೆ ಶಿಕ್ಷಕರು ಈ ಒಂದು ಅಸಮಾ ಧಾನವನ್ನು ಹೊರಹಾಕಿದರು.ಶಿಕ್ಷಕರ ಸಂಘದ ವಿರುದ್ಧವೇ ಶಿಕ್ಷಕರ ಆರೋಪವನ್ನು ಮಾಡಿದ್ದಾರೆ.ಶಿಕ್ಷಕರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಅನ್ನೋ ಆರೋಪ ಶಿಕ್ಷಕರನ್ನು ಸಮಾಧಾನ ಮಾಡಲು ಅಧಿಕಾರಿಗಳು ಕೂಡಾ ಹರಸಾಹಸ ಪಡುತ್ತಿ ರುವ ಚಿತ್ರಣ ಕಂಡು ಬಂದಿತು.

ಇದರ ನಡುವೆ ಕೌನ್ಸಲಿಂಗ್ ಗೆ ಬಂದಿದ್ದ ಮಹಿಳಾ ಶಿಕ್ಷಕಿ ಯೊಬ್ಬರು ಸ್ಥಳದಲ್ಲಿಯೇ ಕುಸಿದು ಬಿದ್ದರು ನಂತರ ಅಕ್ಕ ಪಕ್ಕದಲ್ಲಿದ್ದ ಇನ್ನಿತರ ಮಹಿಳಾ ಶಿಕ್ಷಕಿಯರು ಅವರನ್ನು ಹಿಡಿದು ಹಾರೈಕೆ ಮಾಡಿದ್ದು ಕಂಡು ಬಂದಿತು ಅಲ್ಲದೇ ಸ್ಥಳಕ್ಕೇ ಡಿಡಿಪಿಐ ಬರುವಂತೆ ಘೋಗರೆಯುತ್ತಿರುವ ಚಿತ್ರಣವೂ ಕೂಡಾ ಕಂಡು ಬಂದಿತು.

ಒಟ್ಟಾರೆ ಶಿಕ್ಷಕರ ವರ್ಗಾವಣೆ ಏನೋ ಆರಂಭಗೊಂಡಿದ್ದು ಗೊಂದಲದ ಗೂಡಾಗಿದ್ದು ಇದರ ನಡುವೆ ಕೌನ್ಸಲಿಂಗ್ ಗೆ ಬಂದ ಶಿಕ್ಷಕರ ಗೋಳು ಸಮಸ್ಯೆಯನ್ನು ಯಾರು ಕೇಳುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದ್ದು ಮೊದಲ ದಿನವೇ ಹೀಗಾದರೆ ಇನ್ನೂ ಮುಂದೇನು ಎಂಬ ಪ್ರಶ್ನೆ ವರ್ಗಾವ ಣೆಯ ನಿರೀಕ್ಷೆಯಲ್ಲಿರುವ ಶಿಕ್ಷಕರಿಗೆ ಕಾಡುತ್ತಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.