ದಾರಿ ಯಾವುದಯ್ಯ ಈ ಸರ್ಕಾರಿ ಶಾಲೆಗೆ ಪ್ರತಿದಿನ ಹೇಗೆ ಶಾಲೆಗೆ ಶಿಕ್ಷಕರು ಮಕ್ಕಳು ಹೋಗಬೇಕು ಒಮ್ಮೆ ನೋಡಿ ಉತ್ತರಿಸಿ ಸಚಿವರೇ

Suddi Sante Desk

ಬೆಳಗಾವಿ

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದ ಸರ್ಕಾರಿ ಶಾಲೆಗೆ ದಾರಿ ಇಲ್ಲದೇ ಮಕ್ಕಳು ಕೆಸರಲ್ಲಿ ನಡೆದುಕೊಂಡು ಹೋಗುವ ಪರಿಸ್ಥಿತಿ ಉದ್ಭವವಾಗಿದೆ. ಹೌದು ಇಲ್ಲಿನ ಶಾಲೆಯ ಮಕ್ಕಳಿಗೆ ಸರಿಯಾದ ರಸ್ತೆ ಇಲ್ಲದೇ ಕೆಸರಲ್ಲಿ ನಡೆದುಕೊಂಡು ಹೋಗುತ್ತಿದ್ದಾರೆ.

ಇಂತಹ ಪರಿಸ್ಥಿತಿ ಉದ್ಭವವಾಗಿದರೂ ರಾಜ್ಯದ ಶಿಕ್ಷಣ ಸಚಿವರು ಗಮನಕ್ಕೆ ಈ ವಿಚಾರ ಬಂದಿಲ್ಲವಾ ಎಂಬ ಪ್ರಶ್ನೆ ಇದೀಗ ಎಲ್ಲರಲ್ಲೂ ಮೂಡಿದ್ದು ಸಧ್ಯ ಬಿಟ್ಟು ಬಿಡಲಾರದ ಮಳೆಯಲ್ಲಿ ಹೇಗೆ ಶಾಲೆಗೆ ಶಿಕ್ಷಕರು ವಿದ್ಯಾರ್ಥಿ ಗಳು ಹೋಗಬೇಕು ಎಂಬ ಪ್ರಶ್ನೆ ಗೆ ಶಿಕ್ಷಣ ಸಚಿವರೇ ಉತ್ತರಿಸ ಬೇಕಿದೆ

ನಿಡಗುಂದಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ವಿಠ್ಠಲ ನಗರ ಸರ್ಕಾರಿ ಶಾಲೆಗೆ ದಾರಿ ಇಲ್ಲದೇ ಮಕ್ಕಳು ಕೆಸರಲ್ಲಿ ನಡೆದು ಕೊಂಡು‌ ಬರುತ್ತಿದ್ದಾರೆ. ಮಳೆಗಾಲದಲ್ಲಾಂ ತೂ ಮಕ್ಕಳ ಪರಿಸ್ಥಿತಿ ಆ ದೇವರಿಗೆ ಪ್ರೀತಿ ಮಳೆಗಾಲದಲ್ಲಿ ನಿತ್ಯ ಕೆಸರಿನಲ್ಲಿ ಬರೋದ್ರಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ.ಇಂತಹ ಪರಿಸ್ಥಿತಿ ಇದ್ದರೂ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ಯಾವುದೇ ಕ್ರಮ ಕೈಗೊಳ್ಳದೇ ಪುಟ್ಟ ಮಕ್ಕಳ ಆರೋಗ್ಯದ ಜೊತೆ ಆಟ ಆಡುತ್ತಿರುವುದು ನಿಜಕ್ಕೂ ನಾಚಿಕೆ ಗೇಡಿನ ಸಂಗತಿ.

ಇನ್ನೂ ಸರಕಾರಿ ಶಾಲೆಗೆ ತೆರಳಲು ದಾರಿ ಇಲ್ಲದೆ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವುದಕ್ಕೆ ನಿರಾಕರಣೆ ಮಾಡುತ್ತಿದ್ದು ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.ಅಲ್ಲದೇ ಗ್ರಾಮಕ್ಕೆ ಅಧಿಕಾರಿ ಗಳು ಬಂದರೆ ತಕ್ಕ ಪಾಠ ಕಲಿಸುವುದಾಗಿ ಅಲ್ಲಿನ ಗ್ರಾಮ ಸ್ಥರು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.