ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಕುರಿತು ಗ್ರಾಮೀಣ ಶಿಕ್ಷಕರ ಸಂಘದವರು ಒತ್ತಾಯಿಸಿದ್ದೇನು

Suddi Sante Desk

ಹುಬ್ಬಳ್ಳಿ –

ಕಳೆದ ಐದು ವರ್ಷಗಳಿಂದ ಶಿಕ್ಷಕರ ವರ್ಗಾವಣೆ ನಡೆಯದಿರುವುದರಿಂದ ಅತೀ ಶೀಘ್ರ ಪ್ರಕ್ರಿಯೆ ಪ್ರಾರಂಭಿಸಿ.ಈ ಸಾಲಿನ ವರ್ಗಾವಣೆ ಶೇ.ಮಿತಿ ಹೆಚ್ಚಿಸಲು ಶಿಕ್ಷಣ ಸಚಿವರಿಗೆ ಗ್ರಾಮೀಣ ಶಿಕ್ಷಕರ ಸಂಘದ ಒತ್ತಾಯವನ್ನು ಮಾಡಿದೆ

ಶಿಕ್ಷಕ ಸ್ನೇಹಿ ವರ್ಗಾವಣೆ ಪರಿಕಲ್ಪನೆ ಪರಿಚಯಿಸುವ ಮೂಲಕ ಶಿಕ್ಷಕರ ಬಹುದಿನಗಳ ಬೇಡಿಕೆ ವರ್ಗಾವಣೆ ಪ್ರಕ್ರಿಯೆಯನ್ನು ನಮ್ಮ ಮನವಿಗೆ ಅಳಲಿಗೆ ಒಗೊ ಟ್ಟು ಪ್ರಾರಂಭ ಮಾಡುತ್ತಿರುವ ತಮಗೆ ನಮ್ಮ ಸಂಘ ವು ಸಮಸ್ತ ಗ್ರಾಮೀಣ ಶಿಕ್ಷಕರ ಪರವಾಗಿ ಹಾಗೂ ವರ್ಗಾವಣೆ ಅಪೇಕ್ಷಿತರ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು ಸಲ್ಲಿಸುತ್ತದೆ ಹೀಗಾಗಿ ಮಿತಿ ಯನ್ನು ಹೆಚ್ಚಳ ಮಾಡುವಂತೆ ಒತ್ತಾಯಿಸಿದೆ

ಕಳೆದ ಮೂರು ವರ್ಷಗಳಿಂದ ವಿವಿಧ ತಾಂತ್ರಿಕ ಸಮಸ್ಯೆ ಉಂಟಾಗಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆದಿರುವುದಿಲ್ಲ ಆದ್ದರಿಂದ ಈ ವರ್ಷದ ವರ್ಗಾ ವಣೆ ಪ್ರಕ್ರಿಯೆಯಲ್ಲಿ ವರ್ಗಾವಣೆ ಮಿತಿಯನ್ನು ಘಟಕದ ಒಳಗೆ 10% ಹಾಗೂ ಘಟಕದ ಹೊರಗೆ 6% ಹೆಚ್ಚಿಸಿ ವರ್ಗಾವಣೆಯಿಂದ ವಂಚಿತರಾದ ಶಿಕ್ಷಕರಿಗೆ ಅನುಕೂಲ ಮಾಡಿಕೊಡಲು ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಅಶೋಕ ಸಜ್ಜನ ಒತ್ತಾಯ ಮಾಡಿದ್ದಾರೆ

ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ್ ಉಪ್ಪಿನ್ .ಗೌರವಾಧ್ಯಕ್ಷರಾದ ಎಲ್ ಐ ಲಕ್ಕಮ್ಮ ನವರ ಕೋಶಾಧ್ಯಕ್ಷರಾದ ಎಸ್ ಎಫ್ ಪಾಟೀಲ್ ಕಾರ್ಯಾಧ್ಯಕ್ಷರಾದ ಶರಣಪ್ಪ ಗೌಡ ಆರ್ ಕೆ ಮಹಾಪೋಷಕರಾದ ಪವಾಡಪ್ಪ ಕಾಂಬ್ಳೆ ಹಾಗೂ ರಾಜ್ಯ ಪದಾಧಿಕಾರಿಗಳಾದ ಗೋವಿಂದ ಜುಜಾರೆ, ಹನುಮಂತಪ್ಪ ಮೇಟಿ, ಡಿ.ಎಸ್.ಭಜಂತ್ರಿ, ಕುಕನೂ ರ, ರಾಮಪ್ಪ ಹಂಡಿ .ಎಮ್ ಆಯ್ ಮುನವಳ್ಳಿ ಮಹ್ಮದ್ ರಫಿ .ಡಿ ಟಿ ಬಂಡಿವಡ್ಡರ,ಶರಣಬಸವ ಬನ್ನಿಗೋಳ.ಈರಪ್ಪ ಸೊರಟೂರ ,ಎಂ.ವಿ ಕುಸುಮಾ.ರಾಜಶ್ರೀ ಪ್ರಭಾಕರ್, ಜಿ ಟಿ ಲಕ್ಷ್ಮೀದೇವ ಮ್ಮ ,ಕಲ್ಪನಾ ಚಂದನಕರ, ರವಿ ಬಂಗೆನ್ನವರ, ಮುತ್ತಣ್ಣ ಹುಬ್ಬಳ್ಳಿ ,ಪ್ರವೀಣ ಕೊಡಗು,ಎಮ್ ಎಸ್ ಶ್ರೀನಿವಾಸ, ಅಶೋಕ ಬಿಸೆರೊಟ್ಟಿ ,ನಾಗರಾಜ್ ಆತಡಕರ,ನಾಗರಾಜ್ ರುದ್ರೇಶ್.ಕುರ್ಲಿ, ರೇಖಾದೇ ವಿ,ದೇವಿಕಾ ಕಮ್ಮಾರ ವಿಜಯಲಕ್ಷ್ಮಿ ,ಬಿ.ಶಾಂತಮ್ಮ ಮುಂತಾದ ಪದಾಧಿಕಾರಿಗಳು ಶಿಕ್ಷಣ ಸಚಿವರಿಗೆ ಮನವಿ ಮಾಡಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.