ತಡಕೋಡ PDO ಹೀಗ್ಯಾಕೆ ಮಾಡಿದರು – ಅವರೇ ವಿಶೇಷ ಗ್ರಾಮ ಸಭೆ ಕರೆದು ಅವರೇ ಬರೆದಿದ್ದರೇ ಹೇಗೆ…..

Suddi Sante Desk

ಧಾರವಾಡ-

ತಡಕೋಡ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವಿರುದ್ಧ ಗ್ರಾಮಸ್ಥರು ಸಿಡಿದೆದ್ದಿದ್ದಾರೆ. ಹೌದು ತಡಕೊಡ ಪಿಡಿಓ ವಿರುದ್ಧ ಗ್ರಾಮಸ್ಥರ ಕೆಂಡಾಮಂಡಲವಾಗಿದ್ದಾರೆ

ಧಾರವಾಡ ತಾಲೂಕಿನ ತಡಕೊಡ ಗ್ರಾಮ ಪಂಚಾಯತಿ ಪಿಡಿಓ ತನ್ವೀರ್ ಡಿ ವಿರುದ್ಧ ಈಗ ಗ್ರಾಮಾ್ಥರು ಆಕ್ರೋಶಗೊಂಡಿದ್ದಾರೆ.ಕಳೆದ ದಿನ ಗ್ರಾಮ ಸಭೆಗೆ ಗ್ರಾಮಸ್ಥರನ್ನು ಅಹ್ವಾನಿಸಿದ್ದರು. ಪಂಚಾಯತಿ.

ಸಭೆ ಕರೆದ ಹಿನ್ನಲೆಯಲ್ಲಿ ಪಂಚಾಯತಿ ಗೆ ಗ್ರಾಮ ಸ್ಥರು ಬಂದಿದ್ದಾರೆ.ಸಭೆ ಕರೆದಿದ್ದಾರೆ ಅಂತಾ ಗ್ರಾಮ ಸ್ಥರು ಬಂದಿದ್ದು ಮುಂಜಾನೆ ಇಂದ ಸಂಜೆಯ ವರೆಗೂ ಗ್ರಾಮ ಸಭೆ ನಡೆಸದೇ ಪಂಚಾಯತಿ ನಿರ್ಲಕ್ಷ್ಯವನ್ನು ಮಾಡಿದ್ದಾರೆ

ಡಂಗುರದ ಮೂಲಕ ಗ್ರಾಮಸ್ಥರನ್ನು ಗ್ರಾಮ ಸಭೆಗೆ ಆಹ್ವಾನವನ್ನು ಮಾಡಲಾಗಿತ್ತು‌.ಈಗಾಗಲೇ ಪಂಚಾ ಯತಿ ಸದಸ್ಯರ ಅಸಮಾಧಾನಕ್ಕೆ ಗುರಿಯಾಗಿದ್ದಾರೆ ಪಂಚಾಯತಿ ಪಿಡಿಓ.

ಕಳೆದ ಎರಡು ದಿನಗಳ ಹಿಂದೆ ಪಿಡಿಓ ವಿರುದ್ಧ ಪಂಚಾಯತಿ ಸದಸ್ಯರು ಅಹೋ ರಾತ್ರಿ ಧರಣಿ ನಡೆಸಿದ್ದರು.

ಈಗ ಗ್ರಾಮಸ್ಥರು ಪಿಡಿಓ ವಿರುದ್ಧ ಮತ್ತಷ್ಟು ಸಿಡಿ ದೆದ್ದು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.ಗ್ರಾಮ ಸಭೆ ಹಿನ್ನೆಲೆ ಜಮೀನಿನ ಕೆಲಸ ಬಿಟ್ಟು ಬಂದಿದ್ದಾರೆ ಹಲವು‌ ರೈತರು ಕಾದು ಕಾದು ಸುಸ್ತಾಗಿ ಅಧಿಕಾರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು

ಇಲ್ಲಿ ಪಿಡಿಓ ಅಧಿಕಾರಿ ಸರಿಯಾಗಿ ಕಾರ್ಯ ನಿರ್ವಹಿ ಸುತ್ತಿಲ್ಲ ಎಂದು ಆರೋಪವನ್ನು ಮಾಡಿದರು.ಇನ್ನೂ ಸಂಜೆವರೆಗೆ ಸಭೆಗಾಗಿ ಕಾದು ಕಾದು ಮನೆಗೆ ಮರಳಿದ‌ ರೈತರು ಗ್ರಾಮಸ್ಥರು ಈಗ ಮುಂದಿನ ಹೋರಾಟದ ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.