This is the title of the web page
This is the title of the web page

Live Stream

[ytplayer id=’1198′]

November 2025
T F S S M T W
 12345
6789101112
13141516171819
20212223242526
27282930  

| Latest Version 8.0.1 |

Local News

ಧಾರವಾಡದಲ್ಲಿ ಮಾನವೀಯತೆ ಮೆರೆದ ಕೈ ಪಕ್ಷದ ಕಾರ್ಯಕರ್ತ ಹೇಮಂತ ಗುರ್ಲಹೊಸೂರ ಮಾಡಿದ ಕೆಲಸ ನೋಡಿದರೆ ಖುಷಿ ಪಡತೀರಾ…..

WhatsApp Group Join Now
Telegram Group Join Now

ಧಾರವಾಡ –

ಕೈ ಪಕ್ಷದ ಕಾರ್ಯಕರ್ತ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಓಬಿಸಿ ಕಾಂಗ್ರೇಸ್ ಪಕ್ಷದ ಅಧ್ಯಕ್ಷ ಹೇಮಂತ ಗುರ್ಲಹೊಸೂರ ಮಾನವೀಯ ತೆಯನ್ನು ಮೆರೆದಿದ್ದಾರೆ.ಹೌದು ಲಾಕ್ ಡೌನ್ ನಲ್ಲಿ ಇವರು ಮಾಡಿದ ಕೆಲಸ ನಿಜಕ್ಕೂ ಇವರ ಕಾರ್ಯವೈ ಖರಿಗೆ ಹಿಡಿದ ಕೈಗನ್ನಡಿಯಾಗಿದೆ.

ಅಷ್ಟಕ್ಕೂ ಇವರು ಮಾಡಿದ ಕೆಲಸ ನೋಡಿದರೆ ಮಲ್ಲಿಕಾರ್ಜುನ ಉಣ್ಣಿ ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ನಿವಾಸಿ. ಚಿಕಿತ್ಸೆ ಗೆಂದು ಸವದತ್ತಿಯಿಂದ ಧಾರವಾಡದ ಮಾನ ಸಿಕ ಆಸ್ಪತ್ರೆಗೆ ಬಂದಿದ್ದರು.

ಧಾರವಾಡಗೆ ಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡು ಮರಳಿ ಸವದತ್ತಿಗೆ ಹೊಗಬೇಕು ಎನ್ನುವಷ್ಟರಲ್ಲಿ ವಾಹನವಿಲ್ಲದೇ ಹೊಗಲು ಪರದಾ ಡುತ್ತಿದ್ದರು. ಈ ಒಂದು ವಿಚಾರವನ್ನು ಉಮೇಶ್ ಎಂಬುವರು ಕೈ ಪಕ್ಷದ ಕಾರ್ಯಕರ್ತ ಹೇಮಂತ್ ಗುರ್ಲಹೊಸೂರು ಅವರಿಗೆ ಹೇಳಿದ್ದಾರೆ.ಈ ಒಂದು ವಿಚಾರವನ್ನು ತಿಳಿದ ಕೂಡಲೇ ಹೇಮಂತ್ ಇವರು ವಿಚಾರವನ್ನು ತಿಳಿದುಕೊಂಡು ಸುಮ್ಮನೇ ಕುಳಿತು ಕೊಳ್ಳದೇ ಮನೆಯಿಂದ ಮಾನಸಿಕ ಆಸ್ಪತ್ರೆಗೆ ಆಗ ಮಿಸಿ ಚಿಕಿತ್ಸೆಗೆಂದು ಬಂದು ಮರಳಿ ಹೋಗಲು ವಾಹನವಿಲ್ಲದೇ ಹೊಗಲು ಪರದಾಡುತ್ತಿದ್ದವರಿಗೆ ನೆರವಾಗಿದ್ದಾರೆ.

ಕೂಡಲೇ ಕಾರೊಂದನ್ನು ತರೆಸಿ ಅವರನ್ನು ಸವದ ತ್ತಿಗೆ ಕಳಿಸಿಕೊಟ್ಟಿದ್ದಾರೆ.ಇದರೊಂದಿಗೆ ನೊಂದು ಕೊಂಡಿದ್ದ ಕುಟುಂಬಕ್ಕೆ ಇವರು ನೆರವಾಗಿ ಮಾನವೀ ಯತೆಯನ್ನು ಧಾರವಾಡದ ಮರಾಠ ಕಾಲೋನಿಯ ನಿವಾಸಿಯಾಗಿರುವ ಇವರು ಕಳೆದ ಹಲವು ವರುಷ ಗಳಿಂದ ನಿಷ್ಠಾವಂತರಾಗಿ ಪಕ್ಷದಲ್ಲಿ ಕೆಲಸ ಮಾಡ್ತಾ ಇದ್ದಾರೆ. ಇವರು ಮಾಡುತ್ತಿರುವ ಕೆಲಸ ಕಾರ್ಯಗ ಳಿಗೆ ಈ ಒಂದು ಕಾರ್ಯವೇ ಸಾಕ್ಷಿಯಾಗಿದೆ.ಇನ್ನೂ ಇವರ ಕಾರ್ಯಕ್ಕೆ ಸ್ಥಳೀಯ ಪಕ್ಷದ ಲೀಡರ್ಸ ಗಳು ಮತ್ತು ನಾಯಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿ ದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk