ನಾಪತ್ತೆಯಾಗಿದ್ದ ಏಳು ವರ್ಷದ ಬಾಲಕ ಶವವಾಗಿ ಪತ್ತೆ – ಕೆರೆಯಲ್ಲಿ ಪತ್ತೆಯಾದ ‘ಗಣ್ಯ’ನ ಶವ…..

Suddi Sante Desk

ದಾವಣಗೆರೆ –

ನಿನ್ನೆ ಅಷ್ಟೇ ನಾಪತ್ತೆಯಾಗಿದ್ದ ಏಳು ವರ್ಷದ ಬಾಲಕನೊಬ್ಬ ಶವವಾಗಿ ಪತ್ತೆಯಾದ ಘಟನೆ ದಾವಣಗೇರೆ ಯಲ್ಲಿ ನಡೆದಿದೆ.ಹೌದು ಗಣ್ಯ (07) ಸಾವನ್ನಪ್ಪಿದ ಬಾಲಕನಾಗಿದ್ದಾನೆ.ದಾವಣಗೆರೆ ನಗರದ ಟಿವಿ ಸ್ಟೇಷನ್ ಕೆರೆಯಲ್ಲಿ ಈ ಒಂದು ಘಟನೆ ನಡೆದಿದೆ.

ಕೆರೆ ಪಕ್ಕದ ಚಿಕ್ಕಮ್ಮನ್ನಿ ದೇವರಾಜ್ ಅರಸು ಬಡಾವಣೆ ನಿವಾಸಿ ಗಣ್ಯ ಬಾಲಕನಾಗಿದ್ದಾನೆ.ನಿನ್ನೆ ಮಧ್ಯಾಹ್ನ ಮನೆಯಿಂದ ನಾಪತ್ತೆ ಆಗಿದ್ದನು ಈ ಬಾಲಕ. ಕೆಟಿಜೆ ನಗರ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.ಬೆಳಿಗ್ಗೆ ಕೆರೆಯಲ್ಲಿ ಶವ.ಕೆರೆಗೆ ಕಂಪೌಂಡ್ ಕಟ್ಟದ ಹಿನ್ನೆಲೆ ಬಾಲಕ ಸಾವಿಗೀಡಾದ್ದು ಸ್ಥಳೀಯರ ಆರೋಪ ಕೇಳಿ ಬಂದಿದೆ.ಕೆಟಿಜೆ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.

ಕೆರೆಯಿಂದ ಬಾಲಕನ ಶವ ಹೊರಕ್ಕೆ ತೆಗೆದಿದ್ದಾರೆ ಸ್ಥಳೀಯರು ಸ್ವಲ್ಪ ಬುದ್ಧಿ ಮಾಂದ್ಯನಿದ್ದ ಬಾಲಕನ ಸಾವಿನಿಂದಾಗಿದಿ ಪೋಷಕರು ಆತಂಕಗೊಂಡಿ ದ್ದಾರೆ.ದೊಡ್ಡಮ್ಮನ ಮನೆಯಿಂದ ತಿರುಗಾಡುತ್ತಾ ಕೆರೆ ಬಂದು ಬಿದ್ದಿರುವ ಶಂಕೆಯನ್ನು ವ್ಯಕ್ತಪಡಿಸಿದ್ದು ಪೊಲೀಸರು ತನಿಖೆ ಮಾಡತಾ ಇದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.