ಇನ್ನೂ ಮುಂದೆ ಭಾನುವಾರವೂ ಶಾಲೆ – ಪಠ್ಯಕ್ರಮ ಪೂರ್ಣಗೊಳಿ ಸಲು ಈ ಪ್ಲಾನ್ ಎಂದರು ಶಿಕ್ಷಣ ಸಚಿವರು…..

Suddi Sante Desk

ಬೆಂಗಳೂರು –

ಈಗಾಗಲೇ ವರ್ಗಾವಣೆ ಸೇರಿದಂತೆ ಹತ್ತು ಹಲವಾರು ಸಮಸ್ಯೆಗಳ ನಡುವೆ ಸಿಕ್ಕು ಒದ್ದಾಡುತ್ತಿರುವ ನಾಡಿನ ಶಿಕ್ಷಕರಿಗೆ ಮತ್ತೊಂದು ದೊಡ್ಡ ಕೆಲಸವನ್ನು ಹಚ್ಚಲು ಶಿಕ್ಷಣ ಸಚಿವರು ಮುಂದಾಗಿದ್ದಾರೆ.ಹೌದು ಒಂದು ಕಡೆ ವರ್ಗಾವಣೆಗಾಗಿ ನಾಡಿನ ಶಿಕ್ಷಕರು ಏನೇಲ್ಲಾ ಕಸರತ್ತನ್ನು ಮಾಡುತ್ತಿದ್ದರೆ ಇನ್ನೂ ಇತ್ತ ಅಕ್ಟೋಬರ್ 21 ರಿಂದ ಇಲಾಖೆ ಪೂರ್ಣ ಪ್ರಮಾಣದಲ್ಲಿ ಶಾಲೆಗಳನ್ನು ಆರಂಭಮಾಡುತ್ತಿದ್ದು ಇದರ ನಡುವೆ ಕರೋನಾ ದಿಂದಾಗಿ ಶಾಲೆಗಳು ತಡವಾಗಿ ಆರಂಭವಾಗಿದ್ದು ಹೀಗಾಗಿ ಪಠ್ಯಕ್ರಮವನ್ನು ಪೂರ್ಣಗೊಳಿ ಸಲು ರವಿವಾರವೂ ಕೂಡಾ ಶಾಲೆಗಳನ್ನು ನಡೆಸಲು ನಿರ್ಧರಿಸಿದ್ದು ಈ ಕುರಿತಂತೆ ಶೀಘ್ರದಲ್ಲೇ ತಿರ್ಮಾನವನ್ನು ಮಾಡಲಾಗುವುದು ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದರು.

ತುಮಕೂರಿನಲ್ಲಿ ಮಾತನಾಡಿದ ಅವರು ಭಾನುವಾರವೂ ಶಾಲೆಗಳನ್ನು ನಡೆಸುವ ಮೂಲಕ ಪಠ್ಯಕ್ರಮ ಪೂರ್ಣ ಗೊಳಿಸಲು ಚಿಂತನೆ ನಡೆದಿದೆ ಎಂದರು. ಪಠ್ಯಕ್ರಮ ಕಡಿತ ಮಾಡುವ ಆಲೋಚನೆ ಇಲ್ಲ ಇದರ ಬದಲಾಗಿ ರವಿವಾರ ವೂ ಶಾಲೆಗಳನ್ನು ನಡೆಸಲಾಗುತ್ತದೆ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಸಮಾಲೋಚನೆ ನಡೆಸಿ, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಭಿಪ್ರಾಯ ಪಡೆಯಲಾಗುವುದು.ಪಠ್ಯಕ್ರಮ ಕಡಿತ ಮಾಡುವ ಯಾವುದೇ ಯೋಚನೆಯಿಲ್ಲ ಎಂದು ತಿಳಿಸಿದ್ದಾರೆ.ಶನಿವಾರ, ಭಾನುವಾರವೂ ತರಗತಿ ನಡೆಸಿ ಪಠ್ಯಕ್ರಮ ಪೂರ್ಣಗೊಳಿಸುವ ಕುರಿತು ಪರಿಶೀಲನೆ ನಡೆಸಲಾಗಿದೆ. ಇನ್ನು 10 ಹತ್ತು ದಿನಗಳ ಒಳಗೆ ಉಳಿದ ತರಗತಿ ಆರಂಭಿಸಲಿದ್ದು, ಪರೀಕ್ಷೆಗೆ ಅಗತ್ಯವಿದ್ದಲ್ಲಿ ಮಾತ್ರ ಪಠ್ಯಕ್ರಮ ಕಡಿಮೆ ಮಾಡುವ ಬಗ್ಗೆ ಜನವರಿ, ಫೆಬ್ರುವರಿ ಯಲ್ಲಿ ತೀರ್ಮಾನಿಸಲಾಗುವುದು ಎಂದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.