BEO ಅವರಿಂದ ಶಿಕ್ಷಕರಿಗೆ ತುರ್ತು ಸಂದೇಶ – ತುರ್ತಾಗಿ ಮಾಹಿತಿ ಯನ್ನು ತುಂಬಿ ಸರ್ಕಾರಿ ಯೋಜನೆ ಪಡೆದುಕೊಳ್ಳುವಂತೆ ಸೂಚನೆ…..

Suddi Sante Desk

ಜೋಯಿಡಾ –

ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವಲಂಬಿತರಿಗೆ ಉಚಿತ ಚಿಕಿತ್ಸೆಯನ್ನು ನೀಡುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಅನುಷ್ಠಾನಗೊಳಿಸಲು ಕಡ್ಡಾಯವಾಗಿ ನಿಖರವಾದ ಮಾಹಿತಿಯನ್ನು ಆನ್ ಲೈನ್ ನಲ್ಲಿ ತುಂಬಲು ಸಪ್ಟಂಬರ್ 30 ರ ಒಳಗಾಗಿ ತುಂಬಲು ಜೋಯಿಡಾ BEO ಅವರು ಸೂಚನೆಯನ್ನು ನೀಡಿದ್ದಾರೆ.

ಹೌದು ಇದೊಂದು ಶಿಕ್ಷಕರಿಗೆ ತುಂಬಾ ಅವಶ್ಯಕ ವಾಗಿದ್ದು ಹೀಗಾಗಿ ಈ ಕೂಡಲೇ ಆನ್ ಲೈನ್ ನಲ್ಲಿ ಅರ್ಜಿಯನ್ನು ಸಮಗ್ರವಾಗಿ ತುಂಬಿ ಮಾಹಿತಿಯನ್ನು ಒದಗಿಸುವಂತೆ ಸೂಚನೆ ನೀಡಿದ್ದಾರೆ.

ಸೆಪ್ಟಂಬರ್ 30 ರ ಒಳಗಾಗಿ ಈ ಒಂದು ಮಾಹಿತಿ ಯನ್ನು ಆನ್ ಲೈನ್ ನಲ್ಲಿ ತುಂಬುವಂತೆ ಜೋಯಿಡಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಕರಿಗೆ ಸೂಚನೆ ನೀಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.