ಶಿಕ್ಷಕ ಬಂಧನ – ಉಸ್ಮಾನ ‌ರ ಬಂಧನದ ಹಿಂದಿನ ಕಾರಣ ಕೇಳಿದರೆ ಶಾಕ್ ಆಗತೀರಾ…..

Suddi Sante Desk

ಕಾಸರಗೋಡು –

ಕಾಸರಗೋಡಿನ ಮೆಲ್ ಪರಂಬಾ ಎಂಬಲ್ಲಿ 13 ವರ್ಷದ ಶಾಲಾ ಬಾಲಕಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ ಆರೋಪದ ಮೇಲೆ ಶಿಕ್ಷಕ ರೊಬ್ಬರನ್ನು ಪೊಲೀಸರು ಬಂಧನ ಮಾಡಿದ್ದಾರೆ.ಈ ಹಿಂದೆ ಇವರ ಮೇಲೆ ಪ್ರಕರಣ ದಾಖಲಿಸಿಕೊಂಡಿ ದ್ದರು.ಆರೋಪಿ ಶಿಕ್ಷಕ ಉಸ್ಮಾನ್ ಇದೀಗ ಪೊಲೀಸ ರಿಗೆ ಶರಣಾಗಿದ್ದಾನೆ.ಶಿಕ್ಷಕ ಉಸ್ಮಾನ್ ಮೃತ ಶಾಲಾ ಬಾಲಕಿ ಜೊತೆಗೆ ಅಸಭ್ಯವಾಗಿ ಚಾಟ್ ಮಾಡುತ್ತಿದ್ದಿ ದ್ದು ಬೆಳಕಿಗೆ ಬಂದಿದೆ.ಆತ ಅಲ್ ಸದಿಯಾ ಇಂಗ್ಲೀಷ್ ಮಾಧ್ಯಮ ಶಾಲೆಯಲ್ಲಿ ಶಿಕ್ಷಕನಾಗಿ ವೃತ್ತಿ ನಿರ್ವಹಿಸುತಿದ್ದರು.

ಮೃತ ಶಾಲ ಬಾಲಕಿಯ ಜೊತೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಂಪರ್ಕ ಹೊಂದಿದ್ದರು.8ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ಸೆ.7 ರಂದು ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು.ನಂತರ ಬಾಲಕಿ ತಂದೆ ತಮ್ಮ ಮಗಳ ಜೊತೆ ಉಸ್ಮಾನ್ ಅನೈತಿಕವಾಗಿ ಚ್ಯಾಟ್ ಮಾಡಿದ್ದಾಗಿ ಆರೋಪಿಸಿದ್ದರು.ಬಾಲಕಿಯ ಇನ್ ಸ್ಟಾಗ್ರಾಂ ಖಾತೆ ಚೆಕ್ ಮಾಡಿದಾಗ ಅದರಲ್ಲಿ ಆಕೆ ಉಸ್ಮಾನ್ ಜೊತೆ ಚ್ಯಾಟ್ ಮಾಡಿರುವುದು ತಿಳಿದು ಬಂದಿತ್ತು.ಆರೋಪಿ ಮೇಲೆ ಲೈಂಗಿಕ ದೌರ್ಜನ್ಯ ಆತ್ಮಹತ್ಯೆಗೆ ಪ್ರಚೋದನೆ ಮುಂತಾದ ಪ್ರಕರಣ ದಾಖಲಿಸಿಕೊಳ್ಲಲಾಗಿದೆ.ಆರೋಪಿ ಪರ ವಕೀಲರು ಉಸ್ಮಾನ್ ಆ ಬಾಲಕಿಯ ಜೊತೆ ಸಂಪರ್ಕದಲ್ಲಿ ಇರಲಿಲ್ಲ ಆಕೆಗೆ ಪಾಠ ಮಾಡಿಲ್ಲ ಎಂದು ಹೇಳಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.