ಗ್ರಾಮ ಪಂಚಾಯತಿ ಅಧ್ಯಕ್ಷರ ವಿರುದ್ಧ ಉಪಾಧ್ಯಕ್ಷರ ಪ್ರತಿಭಟನೆ – ಅಧ್ಯಕ್ಷರ ಹಗರಣ ಬಯಲಿಗೆಳಿದ ಉಪಾಧ್ಯಕ್ಷರು…..

Suddi Sante Desk

ಚಿತ್ರದುರ್ಗ –

ನೂತನ ಗ್ರಾಮ ಪಂಚಾಯತಿ ಕಚೇರಿಯಿಂದ ತನ್ನ ಕುರ್ಚಿ ಹೊರ ಹಾಕಿದ್ದಕ್ಕೆ ಸಿಟ್ಟುಗೊಂಡ ಗ್ರಾಪಂ ಉಪಾಧ್ಯಕ್ಷೆಯು ಅಧ್ಯಕ್ಷರ ಅಕ್ರಮವನ್ನು ಬಯಲಿಗೆಳೆದಿರುವ ಘಟನೆ ಹಿರಿಯೂರು ತಾಲೂಕಿನ ಬುರುಜಿನರೊಪ್ಪ ಗ್ರಾಮದಲ್ಲಿ ನಡೆದಿದೆ ಉಪಾಧ್ಯಕ್ಷೆಯು ಅಕ್ರಮದ ದಾಖಲೆ ಹಿಡಿದು ಬುರುಜನರೊಪ್ಪ ಗ್ರಾಪಂ ಕಾರ್ಯಾಲಯದ ಮುಂದೆ ಏಕಾಂಗಿ ಪ್ರತಿಭಟನೆ ನಡೆಸಿದ್ದಾರೆ

ಅಧ್ಯಕ್ಷರು ಮಾಡಿದ್ದಾರೆ ಎನ್ನಲಾದ ಭ್ರಷ್ಟಾಚಾರ ಅಕ್ರಮ ಬಯಲಿಗೆಳೆದ ಉಪಾಧ್ಯಕ್ಷೆ ತಾಹೀರ ಬಾನು ದಾಖಲೆ ಹಿಡಿದು ಏಕಾಂಗಿಯಾಗಿ ಪ್ರತಿಭಟನೆಗೆ ಕುಳಿತಿದ್ದಾರೆ. ಸರ್ಕಾರಿ ಜಾಗದಲ್ಲಿ ಅಧ್ಯಕ್ಷ ಕುಬೇರಪ್ಪನ ಖಾಸಗಿ ಕಚೇರಿ ನಿರ್ಮಾಣ ಮಾಡಿದ್ದಾರೆ, ಅಧ್ಯಕ್ಷ ಹಾಗೂ ಪಿಡಿಓ ಅಕ್ರಮ ಬಯಲಿಗೆ ಬರುತ್ತೆ ಎಂದು ಹೆದರಿ ನೂತನ ಕೊಠಡಿಯಿಂದ ನನ್ನ ಕುರ್ಚಿ ಹೊರ ಹಾಕಿದ್ದಾರೆ.ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರಕ್ಕೆ ಆರ್.ಓ ಘಟಕ ಖರೀದಿ‌ ಮಾಡಿದ್ದಾರೆ, ಪೆಟ್ರೋಲ್ ಬಂಕ್,ಲೇಔಟ್ ಗೆ ಎನ್ ಓ ಸಿ ನೀಡಲು ಲಕ್ಷ ಲಕ್ಷ ಹಣ ಪಡೆದಿದ್ದಾರೆ ಎಂದು ಅಧ್ಯಕ್ಷ ಕುಬೇರಪ್ಪನ ವಿರುದ್ಧ ಉಪಾಧ್ಯಕ್ಷೆ ಗಂಭೀರ ಆರೋಪ ಮಾಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.