BE0 ಆದೇಶಕ್ಕೆ ತಡೆ ನೀಡಿ ಶಿಕ್ಷಣ ಇಲಾಖೆ – ಇಲಾಖೆಯ ಅಧಿಕಾರಿಗಳ ನಡುವೆ ಮುಸುಕಿನ ಗುದ್ದಾಟ…..

Suddi Sante Desk


ಬಾಗಲಕೋಟೆ –

ಕ್ರಿಸ್ ಮಸ್ ಆಚರಣೆಯ ದಿವಸ ಶಾಲಾ ಮಕ್ಕಳಿಗೆ ಮಾಂಸಾಹಾರಿ ಊಟ ವನ್ನು ನೀಡಿದ ಆರೋಪ ಕುರಿತು ಶಾಲೆಯೊಂದನ್ನು ಮುಚ್ಚುವಂತೆ ಬಿಇಓ ಅವರು ಆದೇಶ ವೊಂದನ್ನು ಮಾಡಿದ್ದರು.ಈ ಒಂದು ಆದೇಶ ಕೇಳಿ ಬಂದ ಬೆನ್ನಲ್ಲೇ ಇಲಾಖೆ ಅದಕ್ಕೆ ಬ್ರೇಕ್ ಹಾಕಿದ್ದಾರೆ.ಹೌದು ಬಾಗಲ ಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಸೆಂಟ್ ಪೌಲ್ ಶಾಲೆಯನ್ನು ಮುಚ್ಚುವಂತೆ ಬಾಗಲಕೋಟೆಯ ಕ್ಷೇತ್ರ ಶಿಕ್ಷಣಾಧಿಕಾರಿ ಹೊರಡಿಸಿದ್ದ ಆದೇಶಕ್ಕೆ ಶಿಕ್ಷಣ ಇಲಾಖೆ ತಡೆ ನೀಡಿದೆ.ಶಾಲೆಯ ಆಡಳಿತ ಮಂಡಳಿಗೆ ಶಿಕ್ಷಣಾಧಿಕಾರಿ ಪತ್ರ ಬರೆದಿದ್ದಾರೆ.ಕ್ರಿಸ್ ಮಸ್ ಆಚರಣೆಯಂದು ನಿಮ್ಮ ಶಾಲೆ ಯಲ್ಲಿ ಮಕ್ಕಳಿಗೆ ಮಾಂಸಾಹಾರ ನೀಡಿರುವುದು ನಮ್ಮ ಗಮನಕ್ಕೆ ತರಲಾಗಿದೆ.

ಈ ನಿಮ್ಮ ವರ್ತನೆ ನಮ್ಮ ಇಲಾಖೆ ಹಾಗೂ ಸಾರ್ವನಿಕ ರನ್ನು ಮುಜುಗರನ್ನುಂಟು ಮಾಡಿದೆ ಮತ್ತೊಂದು ಆದೇಶ ಬರುವವರೆಗೂ ಶಾಲೆಯನ್ನು ತೆರೆ ಯುವಂತಿಲ್ಲ ಎಂದು ಪತ್ರದಲ್ಲಿ ಶಿಕ್ಷಣಾಧಿಕಾರಿ ಉಲ್ಲೇಖಿಸಿದ್ದರು.ಬಳಿಕ ಈ ವಿಚಾರ ಶಿಕ್ಷಣ ಇಲಾಖೆಯ ಗಮನಕ್ಕೆ ತಂದಾಗ ಆದೇಶ ವನ್ನು ರದ್ದುಗೊಳಿಸಲಾಗಿದೆ.ಜಿಲ್ಲಾಧಿಕಾರಿ ಅಥವಾ ಶಿಕ್ಷಣ ಇಲಾಖೆಗೆ ಮಾಹಿತಿ ನೀಡದೆ ಸ್ಥಳೀಯ ಅಧಿಕಾರಿ ಶಾಲೆ ಮುಚ್ಚುವಂತೆ ಆದೇಶ ನೀಡಿದ್ದರು ಮಾಂಸಾಹಾರಿ ಆಹಾರವನ್ನು ನೀಡಿದ್ದಾರೆಂದ ಮಾತ್ರಕ್ಕೆ ನಾವು ಶಾಲೆಯ ನ್ನು ಮುಚ್ಚಲು ಸಾಧ್ಯವಿಲ್ಲ.ಇದೀಗ ಆ ಆದೇಶವನ್ನು ಹಿಂಪಡೆಯಲಾಗುತ್ತಿದೆ ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.ಅಲ್ಲದೇ ಈ ಹಿಂದೆ ಬಲಪಂ ಥೀಯ ಗುಂಪುಗಳು ಶಾಲೆಯ ವಿರುದ್ಧ ಪ್ರತಿಭಟನೆಗಳನ್ನು ನಡೆಸಿದ್ದವು ಮತ್ತು ಶಾಲೆಯು ಮಕ್ಕಳ ನ್ನು ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತಿಲಾಗುತ್ತಿದೆ ಹಾಗೂ ಬೈಬಲ್ ಅನ್ನು ನಂಬುವಂತೆ ಮರುಳು ಮಾಡುತ್ತಿದೆ ಎಂದು ಆರೋಪಿ ಸಿತ್ತು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.