ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳ – ಪರಿಷ್ಕೃತ ಮಾಡಿ ಆದೇಶ ಮಾಡಿದ ದೆಹಲಿ ಸರ್ಕಾರ

Suddi Sante Desk

ನವದೆಹಲಿ –

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರ ಕಾರ್ಮಿಕ ನೌಕರರಿಗೆ ತುಟ್ಟಿ ಭತ್ಯೆ(ಡಿಎ) ಹೆಚ್ಚಿಸಿದೆ ಹೌದು ತುಟ್ಟಿಭತ್ಯೆಯಲ್ಲಿ ಇತ್ತೀಚಿನ ಪರಿಷ್ಕರಣೆಯೊಂದಿಗೆ ಕೌಶಲ್ಯ ರಹಿತ ಕಾರ್ಮಿಕ ನೌಕರರಿಗೆ ಮಾಸಿಕ ವೇತನವನ್ನು ಮಾಸಿಕ 16,064 ರೂ.ನಿಂದ 16,506 ರೂ.ಗೆ ಹೆಚ್ಚಿಸಲಾ ಗಿದೆ.ಅದೇ ರೀತಿ ಅರೆ ಕುಶಲ ಕಾರ್ಮಿಕರ ವೇತನವನ್ನು ಮಾಸಿಕ 17,693 ರೂ.ನಿಂದ 18,187 ರೂ.ಗೆ ಹೆಚ್ಚಿಸಲಾ ಗಿದೆ.

ದಿನಗೂಲಿ ಕಾರ್ಮಿಕರ ವೇತನ ಹೆಚ್ಚಳದ ಕುರಿತು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮಾತನಾಡಿ ಏರುತ್ತಿರುವ ಹಣದುಬ್ಬರದ ಮಧ್ಯೆ,ಇದು ಕಾರ್ಮಿಕ ವರ್ಗದ ಹಿತಾಸಕ್ತಿಗಾಗಿ ತೆಗೆದುಕೊಂಡ ದೊಡ್ಡ ಹೆಜ್ಜೆಯಾ ಗಿದೆ.ದೆಹಲಿ ಸರ್ಕಾರ ಕೌಶಲ್ಯರಹಿತ ಕಾರ್ಮಿಕ ವರ್ಗಗಳಿಗೆ ತುಟ್ಟಿಭತ್ಯೆಯನ್ನು ಹೆಚ್ಚಿಸಿದೆ.ಈ ಕ್ರಮವು ಕೌಶಲ್ಯರಹಿತ ಅರೆ-ಕುಶಲ,ನುರಿತ ಮತ್ತು ದೆಹಲಿ ಸರ್ಕಾರದ ಅಧೀನದಲ್ಲಿ ರುವ ಎಲ್ಲಾ ನಿಗದಿತ ಉದ್ಯೋಗಗಳಲ್ಲಿನ ಇತರ ಕಾರ್ಮಿಕ ರಿಗೆ ಪ್ರಯೋಜನವನ್ನು ನೀಡುತ್ತದೆ ಎಂದರು.ಹೆಚ್ಚುವರಿ ಯಾಗಿ ಮೇಲ್ವಿಚಾರಕರು ಮತ್ತು ಉದ್ಯೋಗಿಗಳ ಕ್ಲೆರಿಕಲ್ ಕೇಡರ್‌ ನ ಕನಿಷ್ಠ ವೇತನ ದರಗಳನ್ನು ಸಹ ಪರಿಷ್ಕರಿಸಲಾ ಗಿದೆ.ಮೆಟ್ರಿಕ್ಯುಲೇಟೆಡ್ ಅಲ್ಲದ ನೌಕರರ ಮಾಸಿಕ ವೇತನ ವನ್ನು 17,693 ರೂ.ಗಳಿಂದ 18,187 ರೂ.ಗಳಿಗೆ ಮತ್ತು ಮೆಟ್ರಿಕ್ಯುಲೇಟಿಂಗ್ ನೌಕರರಿಗೆ 19,473 ರೂ.ಗಳಿಂದ 20,019 ರೂ.ಗಳಿಗೆ ಹೆಚ್ಚಿಸಲಾಗಿದೆ. ಪದವೀಧರರು ಮತ್ತು ಉನ್ನತ ಶೈಕ್ಷಣಿಕ ಅರ್ಹತೆ ಹೊಂದಿರುವವರಿಗೆ ಮಾಸಿಕ ವೇತನವನ್ನು 21,184 ರೂ.ನಿಂದ 21,756 ರೂ.ಗೆ ಹೆಚ್ಚಿಸಲಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.