BEO ಮೇಲೆ ಹಲ್ಲೆ ಶಿಕ್ಷಕರ ಸಂಘಟನೆ ಖಂಡನೆ – ಘಟನೆ ಯನ್ನು‌ ಖಂಡಿಸಿ ಸೂಕ್ತ ಕ್ರಮಕ್ಕೆ ಆಗ್ರಹ…..

Suddi Sante Desk

ಕಾಳಗಿ

ಚಿತ್ತಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ರುದ್ನೂರ ಅವರ ಮೇಲೆ ಹಲ್ಲೆ ಮಾಡಿರುವ ಶಿಕ್ಷಕನ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಇಂತಹ ಕೃತ್ಯಗಳಿಗೆ ಕಡಿವಾಣ ಹಾಕ ಬೇಕು ಎಂದು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ತಹಶೀಲ್ದಾರ್‌ ನಾಗನಾಥ ತರಗೆ ಮೂಲಕ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹಾಂತೇಶ ಪಂಚಾಳ ಮಾತನಾಡಿ ಸರ್ಕಾರಿ ಶಿಕ್ಷಕನಾಗಿ ಮೇಲಾಧಿಕಾರಿ ಮೇಲೆ ಹಲ್ಲೆ ಮಾಡಿದ್ದು ಸರಿ ಯಲ್ಲ.ಈ ಕೃತ್ಯ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಿ ಎಂದು ಒತ್ತಾಯಿಸಿದರು.

ತಾಲೂಕು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ ಕಲಮೂಡ, ಶಿವಕುಮಾರ ಶಾಸ್ತ್ರೀ,ಶಿವಕುಮಾರ ಬಿರಾದಾರ,ದೈಹಿಕ ಶಿಕ್ಷಕ ರಮೇಶ,ಗಂಗಾಧರ ಸಾವಳಗಿ,ಸಿದ್ಧಮ್ಮ ಶೃಂಗಾರ, ಜಗನ್ನಾಥ ಬಂಡಿ,ಪದ್ಮಾವತಿ ಪಂಚಾಳ,ಸುವರ್ಣ ಪಾಟೀಲ ಲಕ್ಷ್ಮಣ ಚೌವ್ಹಾಣ,ಚಂದ್ರಕಾಂತ ಕುಮ್ಮಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.