ಪಾಠದೊಂದಿಗೆ ಶಾಲೆಯಲ್ಲಿ ಸೌಟು ಹಿಡಿದ ಶಿಕ್ಷಕರು ಪಾಠ ನೂ ಮಾಡಬೇಕು ತರಕಾರಿ ತರಬೇಕು ಅಡಿಗೆ ಮಾಡಿ ಊಟನೂ ಮಾಡಿಸಬೇಕು……

Suddi Sante Desk

ರಾಯಚೂರು –

ಪಾಠ ದೊಂದಿಗೆ ಶಾಲೆಯಲ್ಲಿ ಸರ್ಕಾರಿ ಶಾಲಾ ಶಿಕ್ಷಕರು ಅದರಲ್ಲೂ ಪಾಠ ಮಾಡೊದನ್ನು ಬಿಟ್ಟು ಸೌಟು ಹಿಡಿದಿ ದ್ದಾರೆ ಶಿಕ್ಷಕರು ಹೌದು ಇದು ಬಿಸಿಯೂಟ ಅಡುಗೆ ಕಾರ್ಯಕರ್ತೆಯರ ಪ್ರತಿಭಟನೆಯಿಂದಾಗಿ ಇಂತಹ ದೊಂದು ಚಿತ್ರಣ ಕಂಡು ಬಂದಿದ್ದು ರಾಯಚೂರು ಜಿಲ್ಲೆಯಲ್ಲಿ

ಅಕ್ಷರದಾಸೋಹ ನೌಕರರು ರಾಜ್ಯಾದ್ಯಂತ ಪ್ರತಿಭಟನೆ ಹಿನ್ನೆಲೆಯಲ್ಲಿ ಅವರು ಕೆಲಸಕ್ಕೆ ಗೈರಾಗಿದ್ದಾರೆ.ಹೀಗಾಗಿ ಪಾಠ ಮಾಡುತ್ತಾ ಸಧ್ಯ ರಾಜ್ಯದಲ್ಲಿ ಸರ್ಕಾರಿ ಶಾಲಾ ಶಿಕ್ಷಕರು ಅಡುಗೆ ಮಾಡ್ತಾ ಇದ್ದಾರೆ

ರಾಯಚೂರು ಜಿಲ್ಲೆಯಲ್ಲಿ ಶಿಕ್ಷಕರೇ ಅಡುಗೆ ಭಟ್ಟರಾಗಿ ಪಾಠ ಮಾಡುತ್ತಾ ಇದರೊಂದಿಗೆ ಎಲ್ಲಾ ವ್ಯವಸ್ಥೆ ಮಾಡ ಕೊಂಡು ಕೈಯಲ್ಲಿ ಸೌಟು ಹಿಡಿದುಕೊಂಡು ಅಡುಗೆ ಮಾಡಿ ಮಕ್ಕಳಿಗೆ ಎಂದಿನಂತೆ ಯಾವುದೇ ರೀತಿಯ ಅಸ್ತವ್ಯಸ್ತತೆ ಯನ್ನು ಮಾಡದೆ ಮಕ್ಕಳಿಗೆ ಬಿಸಿಯೂಟ ಮಾಡಿಸತಾ ಇದ್ದಾರೆ

ಮಕ್ಕಳಿಗೆ ಬಿಸಿಯೂಟ ನಿಲ್ಲಿಸಬಾರದು ಎಂಬ ನಿಟ್ಟಿನಲ್ಲಿ ಶಿಕ್ಷಕರೇ ಅಡುಗೆ ಭಟ್ಟರಾಗಿ ಎಂದಿನಂತೆ ಪಾಠವನ್ನು ಮಾಡುತ್ತಾ ಇದರೊಂದಿಗೆ ಬಿಸಿಯೂಟ ಮಾಡತಾ ಇದ್ದಾರೆ ಜಿಲ್ಲೆಯ 300 ಕ್ಕೂ ಹೆಚ್ಚು ಶಾಲೆಗಳಲ್ಲಿ ಬಿಸಿಯೂಟಕ್ಕೆ ಶಿಕ್ಷಕರೇ ಅಡುಗೆ ಭಟ್ಟರಾಗಿದ್ದಾರೆ

ಜಿಲ್ಲೆಯಲ್ಲಿ ಸಧ್ಯ ಈ ಒಂದು ಚಿತ್ರಣವು ಕಂಡು ಬರುತ್ತಿದ್ದು ಹೀಗಾಗಿ ಧವಸ ಧಾನ್ಯ ಶುದ್ಧೀಕರಿಸಿ ಅಡುಗೆ ಮಾಡಿ ಮಕ್ಕಳಿಗೆ ಬಡಿಸುವ ಕಾಯಕವನ್ನು ರಾಜ್ಯದಲ್ಲಿ ಶಿಕ್ಷಕರು ಮಾಡತಾ ಇದ್ದಾರೆ

ಕಳೆದ ನಾಲ್ಕು ದಿನಗಳಿಂದ ಇದೇ ಪರಸ್ಥಿತಿ ರಾಜ್ಯದಲ್ಲಿ ಕಂಡು ಬರತಾ ಇದೆ.ಅಡುಗೆ‌ ಮಾಡಿದ ಬಳಿಕ ಶಿಕ್ಷಕರೇ ಪಾತ್ರೆ ಪಗಡೆ ತೊಳೆಯುತ್ತಿರುವ ಘಟನೆಯೂ ಜಿಲ್ಲೆಯಲ್ಲಿ ಕಂಡು ಬರುತ್ತಿದೆ

ಪಾಠ‌ ಮಾಡುವುದರೊಂದಿಗೆ ಕೈಯಲ್ಲಿ ಸೌಟು ಹಿಡಿದಿರುವ ಶಿಕ್ಷಕರಿಗೆ ಮತ್ತೊಂದು ತಲೆನೋವು ಶುರುವಾಗಿದ್ದು ಇದ ರಿಂದಾಗಿ ಮಕ್ಕಳಿಗೆ ಪಾಠ ಸರಿಯಾಗಿ ಇಲ್ಲದಂತಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.