ಲೆಕ್ಕ ಕೇಳಿದವರಿಗೆ ಚೊಕ್ಕ ಮಾಹಿತಿ ನೀಡಿದ ಶಾಸಕ ಅಮೃತ ದೇಸಾಯಿ – ನಾಲ್ಕು ವರ್ಷಗಳ ಕ್ಷೇತ್ರಕ್ಕೆ ತಗೆದುಕೊಂಡು ಬಂದ ಸಮಗ್ರ ಲೆಕ್ಕದ ಮಾಹಿತಿ ನೀಡಿ ಅನುಮಾನವಿದ್ದರೆ ಇನ್ನೂ ಮಾಹಿತಿ ಪಡೆದು ತನಿಖೆ ನಡೆಸಿ ಎಂದ ಧಣಿ

Suddi Sante Desk
ಲೆಕ್ಕ ಕೇಳಿದವರಿಗೆ ಚೊಕ್ಕ ಮಾಹಿತಿ ನೀಡಿದ ಶಾಸಕ ಅಮೃತ ದೇಸಾಯಿ – ನಾಲ್ಕು ವರ್ಷಗಳ ಕ್ಷೇತ್ರಕ್ಕೆ ತಗೆದುಕೊಂಡು ಬಂದ ಸಮಗ್ರ ಲೆಕ್ಕದ ಮಾಹಿತಿ ನೀಡಿ ಅನುಮಾನವಿದ್ದರೆ ಇನ್ನೂ ಮಾಹಿತಿ ಪಡೆದು ತನಿಖೆ ನಡೆಸಿ ಎಂದ ಧಣಿ

ಧಾರವಾಡ

 

ಹೌದು ಮೊನ್ನೆ ಮೊನ್ನೆಯಷ್ಟೇ ಸಂಕಲ್ಪ ಸಭೆಯಲ್ಲಿ ಎಲ್ಲೊ ಕುಳಿತುಕೊಂಡು ಆಡಿಯೋ ಮಾಡಿ ಬಿಡುಗಡೆ ಮಾಡೊದಲ್ಲ ಬನ್ನಿ ನಾವು ನಿಮ್ಮದೇ ದಾರಿ ಕಾಯತಾ ಇದ್ದೇವಿ ಎನ್ನುತ್ತಾ ಭಾಷಣ ಮಾಡಿ ಧಾರವಾಡ ಸೇರಿದಂತೆ ರಾಜ್ಯದ ಗಮನ ಸೆಳೆದಿದ್ದ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಈಗ ತಾವು ಶಾಸಕರಾಗಿ ನಾಲ್ಕು ವರ್ಷಗಳ ಅವಧಿಯಲ್ಲಿ ಕ್ಷೇತ್ರಕ್ಕೆ ತಗೆದುಕೊಂಡು ಬಂದ ಒಟ್ಟು ಅನುದಾನ ವನ್ನು ಲೆಕ್ಕದೊಂದಿಗೆ ಮಾಹಿತಿಯನ್ನು ನೀಡಿದ್ದಾರೆ

ಹೌದು ಸಾಮಾಜಿಕ ಜಾಲ ತಾಣಗಳಲ್ಲಿ ಕೆಲವರು ಲೆಕ್ಕದ ಬಗ್ಗೆ ಮಾಹಿತಿಯನ್ನು ಕೇಳಿದ್ದರು ಈ ಒಂದು ವಿಚಾರ ಕುರಿತಂತೆ ಶಾಸಕ ಅಮೃತ ದೇಸಾಯಿ ನಾಲ್ಕು ವರ್ಷಗಳಲ್ಲಿ ತಾವು ತಗೆದು ಕೊಂಡು ಬಂದ ಅನುದಾನವನ್ನು ಇಲಾಖೆ ಯೊಂದಿಗೆ ಸಂಪೂರ್ಣವಾಗಿ ಮಾಹಿತಿಯನ್ನು ನೀಡಿದ್ದಾರೆ.

ಇದರೊಂದಿಗೆ ಲೆಕ್ಕ ಕೇಳಿದವರ ಗಮನಕ್ಕೆ 4 ವರ್ಷದ ಕ್ಷೇತ್ರದ ಅಭಿವೃದ್ಧಿಯೊಂದಿಗೆ ಲೆಕ್ಕವನ್ನು ಮುಂದಿಟ್ಟು ನಾವು ಲೆಕ್ಕವನ್ನು ಕೊಟ್ಟೇವು ಅನು ಮಾನವಿರುವ ವಿರೋಧಿಗಳು ಮುಕ್ತವಾಗಿ ಮಾಹಿತಿ ಪಡೆಯಿರಿ ಬೇಕಾದರೆ ಸೂಕ್ತ ತನಿಖೆ ನಡೆಸಿ ಎಂದು ಶಾಸಕರು ಹೇಳಿದ್ದಾರೆ.

ಅಲ್ಲದೇ ಧಮ್ಮಿದ್ರೆ ನೀವು ಮಾಡಿದ್ದ ಕೆಲ್ಸದ ಲೆಕ್ಕವನ್ನು ಕೊಡ್ರಿ ಎಂದು ಎದುರಾಳಿಗಳಿಗೆ ಮತ್ತೊಮ್ಮೆ ಸವಾಲ್ ಹಾಕಿದ್ದಾರೆ.ಮೊನ್ನೆ ಮೊನ್ನೆಯಷ್ಟೇ ಶಾಸಕರು ತಮ್ಮ ಭಾಷಣದಲ್ಲಿ ಎದುರಾಳಿಗಳಿಗೆ ಸವಾಲ್ ಹಾಕಿದ್ದ ಬೆನ್ನಲ್ಲೇ ಈಗ ಮತ್ತೊಂದು ವಿಚಾರದಲ್ಲಿ ಸವಾಲ್ ಹಾಕಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.