NPS ಹೋರಾಟದ ಅಖಾಡಕ್ಕಿಳಿಯಲು ಷಡಾಕ್ಷರಿ ಅವರು ನಿರ್ಧಾರ – ನೌಕರರಿಗಾಗಿ ನಿರ್ಣಾಯಕ ಹೋರಾಟ ನಡೆಸಲು ಮುಂದಾದ್ರು ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು

Suddi Sante Desk
NPS ಹೋರಾಟದ ಅಖಾಡಕ್ಕಿಳಿಯಲು ಷಡಾಕ್ಷರಿ ಅವರು ನಿರ್ಧಾರ – ನೌಕರರಿಗಾಗಿ ನಿರ್ಣಾಯಕ ಹೋರಾಟ ನಡೆಸಲು ಮುಂದಾದ್ರು ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು

ಕಲಬುರಗಿ

ಎನ್ ಪಿ ಎಸ್ ರದ್ದತಿ ಮಾಡುವ ವಿಚಾರದಲ್ಲಿ ಅಂತಿಮವಾದ ಹೋರಾಟವನ್ನು ಮಾಡಲಾ ಗುವುದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ಹೇಳಿದರು.ಕಲಬುರಗಿ ಯಲ್ಲಿ ಮಾತನಾಡಿದ ಅವರು ಶೀಘ್ರದಲ್ಲೇ ಈ ಕುರಿತಂತೆ ಪ್ಲಾನ್ ಮಾಡಲಾಗಿದ್ದು (ಎನ್‌ಪಿಎಸ್) ರದ್ದತಿಗೆ ನಿರ್ಣಾಯಕ ಹೋರಾಟ ನಡೆಸಲಾಗುವುದು ಎಂದರು.ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ ಆಯೋಜಿಸಿದ್ದ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ,ಸದಸ್ಯರ ವಾರ್ಷಿಕ ಮಹಾಸಭೆ ಹಾಗೂ 2023ನೇ ಸಾಲಿನ ದಿನದರ್ಶಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಈಗಾಗಲೇ ದೇಶದ ಛತ್ತೀಸ್‌ಗಡ, ರಾಜಸ್ಥಾನ ಮತ್ತು ಪಂಜಾಬ್‌ ರಾಜ್ಯಗಳು ಎನ್‌ಪಿಎಸ್ ಅನುಷ್ಠಾನಕ್ಕೆ ತಂದಿಲ್ಲ ರಾಜ್ಯಗಳಿಂದ ಹೋದ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿಲ್ಲ ಇದನ್ನು ಸಂಸತ್ತಿನಲ್ಲಿ ಕಾಯ್ದೆಯಾಗಿ ಹಾಜರು ಪಡಿಸಿ ಸಮಸ್ಯೆ ಬಗೆಹರಿಸಬೇಕಿದೆ ಹೀಗಾಗಿ, ಕೇಂದ್ರದ ಮೇಲೆ ಒತ್ತಡ ತರವ ಕೆಲಸವನ್ನು ಸಂಘದಿಂದ ಮಾಡಲಾಗುವುದು ಎಂದರು.

ಇನ್ನೂ ಇತ್ತ ಡಿಸೆಂಬರ್ 19 ರಂದು ಬೆಂಗಳೂ ರಿನಲ್ಲಿ ಈ ಕುರಿತಂತೆ ರಾಜ್ಯದ ಎನ್ ಪಿಎಸ್ ನೌಕರರು ಮಾಡು ಇಲ್ಲವೇ ಮಡಿ ಹೋರಾಟ ವನ್ನು ಮಾಡುತ್ತಿದ್ದು ಈ ಒಂದು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ರಾಜ್ಯದ ಮೂಲೆ ಮೂಲೆಗಳಿಂದ ಎನ್ ಪಿಎಸ್ ನೌಕರರು ಹೋರಡಲು ಸಿದ್ದತೆ ಯನ್ನು ಮಾಡಿಕೊಂಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಕಲಬುರಗಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.