ವರದಕ್ಷಿಣೆ ವಿಚಾರಕ್ಕಾಗಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ಚಾಕು ಚೂರಿ ಇರಿತ ಆಸ್ಪತ್ರೆಗೆ ದಾಖಲು…..

Suddi Sante Desk
ವರದಕ್ಷಿಣೆ ವಿಚಾರಕ್ಕಾಗಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ಚಾಕು ಚೂರಿ ಇರಿತ ಆಸ್ಪತ್ರೆಗೆ ದಾಖಲು…..

ಹೊಸಕೋಟೆ

ವರದಕ್ಷಿಣೆ ಕೇಳಲು ಬಂದ ಅಳಿಯನಿಗೆ ಮಾವ ನೊಬ್ಬನು ಚಾಕು ಇರಿದ ಘಟನೆ ಹೊಸಕೋಟೆ ಯಲ್ಲಿ ನಡೆದಿದೆ.ಹೊಸಕೋಟೆ ತಾಲೂಕಿನ ದೊಡ್ಡ ನಲ್ಲಾಳ ಗ್ರಾಮದ ಮೋಹನ ಎಂಬಾತ ಮದುವೆ ಯಾಗಿ ಮೂರು ವರ್ಷಗಳ ಬಳಿಕ ಪತ್ನಿಗೆ ವರದ ಕ್ಷಿಣೆ ಕಿರುಕುಳ ಕೊಡಲು ಶುರು ಮಾಡಿದ್ದಾನೆ, ಅದನ್ನು ಕೇಳಲು ಬಂದ ಮಾವನಿಗೆ ಚಾಕು ಇರಿದಿದ್ದಾನೆ.ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ದೊಡ್ಡನಲ್ಲಾಳ ಗ್ರಾಮದ ಮೋಹನ ಎಂಬಾತ ಕಳೆದ ಮೂರು ವರ್ಷಗಳ ಹಿಂದೆ ಕೊರೊನಾ ಸಂಧರ್ಭದಲ್ಲಿ ನೆರೆಯ ಆಂಧ್ರದಿಂದ ಭವಾನಿ ಎನ್ನುವ ಹುಡುಗಿ ಯನ್ನ ಮನೆಯವರ ಒಪ್ಪಿಗೆಯಂತೆ ಮದುವೆ ಮಾಡಿಕೊಂಡಿದ್ದನು.

3 ವರ್ಷಗಳಾದರೂ ಕೂಡಾ ವರದಕ್ಷಿಣೆ ಕೊಟ್ಟಿಲ್ಲವೆಂದು ಕಿರುಕುಳ ಕೊಡಲು ಶುರು ಮಾಡಿದ್ದಾನೆ.ಈ ಕಾರಣಕ್ಕೆ ತವರು ಮನೆಯವರು ಅಳಿಯನ ಮನೆ ಬಳಿಗೆ ಬಂದು ಪ್ರಶ್ನಿಸಿದ್ದಾರೆ.ಈ ವೇಳೆ ಎರಡು ಕುಟುಂಬಗಳ ನಡುವೆ ಮಾತಿಗೆ ಮಾತು ಬೆಳೆದಿದ್ದು ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಪ್ರಶ್ನೆ ಮಾಡಿದ ಬಾವ ಮೈದನ ಮೇಲೆ ಮೋಹನ ಹಲ್ಲೆ ಮಾಡಿ ಕಾಲು ಮುರಿದಿದ್ದಾನಂತೆ.

ಮೊದಲಿಗೆ ಗ್ರಾಮದಲ್ಲಿ ಬಾವ ಮೈದ ಸೇರಿದಂತೆ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ್ದು ಹಲ್ಲೆಗೊಳ ಗಾದವರು ಹೊಸಕೋಟೆ ಸರ್ಕಾರಿ ಆಸ್ವತ್ರೆಗೆ ಬಂದು ಚಿಕಿತ್ಸೆ ಪಡೆದುಕೊಂಡಿದ್ದಾರೆ.ಈ ವೇಳೆ ಆಸ್ವತ್ರೆ ಬಳಿಗೂ ಬಂದ ಅಳಿಯ ಮೋಹನ್ ಮತ್ತು ಆತನ ಕುಟುಂಬಸ್ಥರು ಆಸ್ವತ್ರೆ ಬಳಿಯಿದ್ದ ಮಹಿಳೆಯ ಕುಟುಂಬಸ್ಥರ ಮೇಲೆ ಮತ್ತೆ ಹಲ್ಲೆ ಮಾಡಿದ್ದು ಅಡ್ಡ ಬಂದ ಮಾವ ಜರ್ನಾಧನ್ ಅವರಿಗೆ ಚಾಕುವಿನಿಂದ ಇರಿದು ನಂತರ ಸ್ಥಳ ದಿಂದ ಎಸ್ಕೇಪ್ ಆಗಿದ್ದಾರೆ. ಹೀಗಾಗಿ ಹಲ್ಲೆಯಿಂದ ಗಾಯಗೊಂಡ ಮಹಿಳೆಯ ಕುಟುಂಬಸ್ಥರು ಹೊಸಕೋಟೆ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂ ಡಿದ್ದು ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ವತ್ರೆಗೆ ದಾಖಲಾಗಿದ್ದಾರೆ.

ಇನ್ನು ಮೋಹನ್ ಇತ್ತೀಚೆಗೆ ಬೇರೆಯವರ ಜೊತೆ ಯಲ್ಲಿ ಅನೈತಿಕ ಸಂಬಂಧಗಳನ್ನ ಹೊಂದಿದ್ದು ಅದನ್ನು ಪ್ರಶ್ನಿಸಿದಕ್ಕೆ ನಮ್ಮ ಹುಡುಗಿಗೆ ಕಿರುಕುಳ ನೀಡಿ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಒಟ್ಟಾರೆ ಮದುವೆಯಾಗಿ ನೂರು ವರ್ಷ ಸುಖ ಸಂಸಾರ ನಡೆಸಬೇಕಿದ್ದ ಇವರು ಮದುವೆಯಾದ ಮೂರು ವರ್ಷಕ್ಕೆ ವಿಲನ್ ಆಗಿ ಬದಲಾಗಿದ್ದು ನಿಜಕ್ಕೂ ವಿಪರ್ಯಾಸ ಇನ್ನು ಈ ಸಂಬಂಧ ಹೊಸಕೋಟೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ಆರೋಪಿಗಳನ್ನ ವಶಕ್ಕೆ ಪಡೆದಿದ್ದು ತನಿಖೆ ಮುಂದುವರೆಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹೊಸಕೋಟೆ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.