ಶಿಕ್ಷಕನ ಸಾವಿಗೆ ಹೊಣೆ ಯಾರು ಅನಾಥವಾಯಿತು ಶಿಕ್ಷಕ ರಾಜು ಬ್ಯಾಡಗಿ ಕುಟುಂಬ…..

Suddi Sante Desk
ಶಿಕ್ಷಕನ ಸಾವಿಗೆ ಹೊಣೆ ಯಾರು ಅನಾಥವಾಯಿತು ಶಿಕ್ಷಕ ರಾಜು ಬ್ಯಾಡಗಿ ಕುಟುಂಬ…..

ಕುಷ್ಟಗಿ

ಹೌದು ಲೈವ್ ವಿಡಿಯೋ ಮಾಡುತ್ತಲೇ ಕ್ರಿಮಿ ನಾಶಕ ಸೇವಿಸಿ ಖಾಸಗಿ ಶಾಲೆಯ ಶಿಕ್ಷಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಷ್ಟಗಿ ಪಟ್ಟಣ ದಲ್ಲಿ ನಡೆದಿದೆ.ರಾಜು ಬ್ಯಾಡಗಿ (45) ಆತ್ಮಹತ್ಯೆ ಮಾಡಿಕೊಂಡ ಖಾಸಗಿ ಶಾಲೆಯ ಶಿಕ್ಷಕರಾಗಿದ್ದಾರೆ

ರಾಜು ಕುಷ್ಟಗಿ ಪಟ್ಟಣದಲ್ಲಿರುವ ಬುತ್ತಿ ಬಸವೇ ಶ್ವರ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ ಕುಷ್ಟಗಿ ಸಾಯಿಬಾಬಾ ದೇವ ಸ್ಥಾನ ಹಿಂಭಾಗ ತನ್ನ‌ ಕೆಲವು ಮಿತ್ರರಿಗೆ ಲೈವ್ ವಿಡಿಯೋ ಮಾಡಿ ಕ್ರಿಮಿನಾಶಕ ಸೇವಿಸಿ ಅಸ್ವಸ್ಥ ನಾಗಿದ್ದರು,

ಕೂಡಲೇ ಕುಷ್ಟಗಿ ಸರ್ಕಾರಿ ಆಸ್ಪತ್ರೆಯಿಂದ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.ಹಣ ಡಬಲ್ ಮಾಡಿಕೊಡುವುದಾಗಿ ಅನೇಕ ಜನರಿಂದ ಎಂಬಿಬಿ ಹೆಸರಿನ ಕಂಪೆನಿಯಲ್ಲಿ ಹಣ ಹೂಡಿಕೆ ಮಾಡಿಸಿದ್ದರು.

ಹಣ ಹೂಡಿಕೆ ಮಾಡಿದವರು ಹಣ ವಾಪಾಸ್ ಕೊಡಿಸುವಂತೆ ಕೇಳುತ್ತಿದ್ದರು ಇದೇ ಕಾರಣಕ್ಕೆ ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡಿರುವ ರಾಜು ಬ್ಯಾಡಗಿ ಪದೇ ಪದೇ ಹಣ ಕೊಡಿಸಿ ಎಂದು ಪೀಡಿಸುತ್ತಿದ್ದಾರೆ.

ಕಂಪನಿಯ 1 ರೂ ಇಟ್ಟು ಕೊಂಡಿಲ್ಲ ಎಂಬಿಬಿ. ಕಂಪನಿಗೆ ಹೂಡಿಕೆ ಮಾಡಿದ ಹಣ ಎಲ್ಲವೂ ಎಂಬಿಬಿ.ಮಾಲಕ ಮಹೇಶ ಬಿರಾದಾರಗೆ ಮುಟ್ಟಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ ಹೀಗಾಗಿ ಇದೊಂದು ದೊಡ್ಡ ಪ್ರಮಾಣದಲ್ಲಿ ಸಾವಿಗೆ ಕಾರಣವಾಗಿದೆ

ತನ್ನ ಪತ್ನಿಯ ಜೀವನ ಹಾಗೂ ಇಬ್ಬರು ಮಕ್ಕಳ ಶೈಕ್ಷಣಿಕ ಭವಿಷ್ಯ ಕಾಳಜಿವಹಿಸಿರಿ ಅಲ್ಲದೇ ನನ್ನ ಕುಟುಂಬಕ್ಕೆ ಯಾವುದೇ ಕಾರಣಕ್ಕೂ ತೊಂದರೆ ಕೊಡಬೇಡಿ ಎಂದು ಹೇಳಿಕೊಂಡಿದ್ದಾನೆ.ಸಧ್ಯ ಈ ಒಂದು ವಿಚಾರ ಕುರಿತು ಪೊಲೀಸರು ದೂರು ದಾಖಲಿಸಿಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

 

ಸುದ್ದಿ ಸಂತೆ ನ್ಯೂಸ್ ಕೊಪ್ಪಳ.

 

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.