BLO ಕರ್ತವ್ಯದಿಂದ ಶಿಕ್ಷಕರನ್ನು ಮುಕ್ತಿಗೊಳಿಸಿ KSPSTA ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಒತ್ತಾಯ – ಶಿಕ್ಷಕರ ಸಮಸ್ಯೆ ಕುರಿತು ರಾಜ್ಯ ಸರ್ಕಾರಕ್ಕೆ ಒತ್ತಾಯ…..

Suddi Sante Desk
BLO ಕರ್ತವ್ಯದಿಂದ ಶಿಕ್ಷಕರನ್ನು ಮುಕ್ತಿಗೊಳಿಸಿ KSPSTA ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಒತ್ತಾಯ – ಶಿಕ್ಷಕರ ಸಮಸ್ಯೆ ಕುರಿತು ರಾಜ್ಯ ಸರ್ಕಾರಕ್ಕೆ ಒತ್ತಾಯ…..

ಬೆಂಗಳೂರು

ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರನ್ನು Blo  ಕೆಲಸದಿಂದ ಮುಕ್ತಿಗೊಳಿಸಬೇಕೆಂದು KSPSTA ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರು ನುಗ್ಲಿ  ರಾಜ್ಯ ಸರಕಾರಕ್ಕೆ ಒತ್ತಾಯ ಮಾಡಿದ್ದಾರೆ ಬೆಂಗಳೂರಿನಲ್ಲಿ ಮಾತನಾಡಿದ ಅವರು ಕಳೆದ ಹಲವಾರು ವರ್ಷಗಳಿಂದ ಶಿಕ್ಷಕರಿಗೆ ದೊಡ್ಡ ಪ್ರಮಾಣದಲ್ಲಿ ಸಮಸ್ಯೆ ಯಾಗಿ ಕಾಡುತ್ತಿರುವ ಈ ಒಂದು ವಿಚಾರ ಕುರಿತು ಧ್ವನಿ ಎತ್ತಿದರು

ರಾಜ್ಯ ಸರ್ಕಾರ ಈ ಒಂದು ಕೂಡಲೇ ಇದನ್ನು ಗಂಭೀರವಾಗಿ ಪರಿಗಣಿಸಿ ಸ್ಪಂದಿಸಿ ಶಿಕ್ಷಕರನ್ನು ಕೇವಲ ಶೈಕ್ಷಣಿಕ ಚಟುವಟಿಕೆ ಗಳಿಗೆ ಮಾತ್ರ ಬಳಸಬೇಕು ಹೊರತಾಗಿ ಬೇರೆ ಯಾವುದೇ ರೀತಿಯ ಚಟುವಟಿಕೆ ಗಳಿಗೆ ಉಪಯೋಗ ಮಾಡಬಾರದೆಂದು ಒತ್ತಾಯ ಮಾಡಿದರು

ಇನ್ನೂ ಶಿಕ್ಷಕರ ಸಾಮಾನ್ಯ ವರ್ಗಾವಣೆಯಲ್ಲಿ ಒಂದು ತಾಲೂಕಿನಿಂದ ಇನ್ನೊಂದು ತಾಲೂಕಿಗೆ ವರ್ಗಾವಣೆಗೊಳ್ಳಲು ಕನಿಷ್ಠ 10 ವರ್ಷ ಸೇವೆ ಮಾಡಬೇಕೆಂಬ ಅವೈಜ್ಞಾನಿಕ ನಿಯಮ ರದ್ದು ಮಾಡಿಸಿ ವರ್ಗಾವಣೆಯಾಗುವ  ಶಿಕ್ಷಕರಿಗೆ ಅನುಕೂಲ ಮಾಡಿಸುವಂತೆ ಒತ್ತಾಯ ಮಾಡಲಾಯಿತು.

 

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

 

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.