ಹಿಟ್ ಆ್ಯಂಡ್ ರನ್ ಗೆ ತಂದೆ ಮತ್ತು‌ ಮಗ ಬಲಿ ಕಾರಿನೊಂದಿಗೆ ಎಸ್ಕೇಪ್ ಆರೋಪಿಗಳಿಗಾಗಿ ಶೋಧ ಮಾಡುತ್ತಿರುವ ಪೊಲೀಸರು…..

Suddi Sante Desk
ಹಿಟ್ ಆ್ಯಂಡ್ ರನ್ ಗೆ ತಂದೆ ಮತ್ತು‌ ಮಗ ಬಲಿ ಕಾರಿನೊಂದಿಗೆ ಎಸ್ಕೇಪ್ ಆರೋಪಿಗಳಿಗಾಗಿ ಶೋಧ ಮಾಡುತ್ತಿರುವ ಪೊಲೀಸರು…..

ಬೆಂಗಳೂರು

ಹಿಟ್ ಆ್ಯಂಡ್ ರನ್ ಗೆ ತಂದೆ ಮತ್ತು‌ ಮಗ ಬಲಿ ಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಇನ್ನೂ ಅಪಘಾತ ಮಾಡಿ ಕಾರಿನೊಂದಿಗೆ ಎಸ್ಕೇಪ್ ಆಗಿರುವ ಆರೋಪಿಗಳಿಗಾಗಿ ಶೋಧ ಮಾಡುತ್ತಿ ದ್ದಾರೆ ಪೊಲೀಸರು.

ಹಿಟ್​ ಆಂಡ್ ರನ್ ಅಪಘಾತಕ್ಕೆ ತಂದೆ ಮತ್ತು‌ ಮಗ ಬಲಿಯಾಗಿದ್ದು ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ಸದಾಶಿವನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಎಂಎಸ್ ರಾಮಯ್ಯ ಬಳಿಯ ಇಸ್ರೋ ಸರ್ಕಲ್​ನಲ್ಲಿ ಸಂಭವಿಸಿದೆ.

ರಘು ಮತ್ತು ಚಿರಂಜೀವಿ ಮೃತ ತಂದೆ ಹಾಗೂ ಮಗ ಆಗಿದ್ದು ವಾಸು ಎಂಬುವರ ಸ್ಥಿತಿ ಗಂಭೀರ ವಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾ ಗುತ್ತಿದೆ.ಮೃತರು ಬೆಂಗಳೂರಿನ ಕುವೆಂಪು ನಗರದ ನಿವಾಸಿಗಳಾಗಿದ್ದಾರೆ

ಪುಸ್ತಕ ವ್ಯಾಪಾರ ಮಾಡುತ್ತಿದ್ದರು ರಾತ್ರಿ ಕೆಲಸ ಮುಗಿಸಿ ಹಿಂದಿರಗುವ ವೇಳೆ ಅಪಘಾತ ನಡೆದಿದೆ.
ಎಂಎಸ್ ರಾಮಯ್ಯ ಅಸ್ಪತ್ರೆ ಕಡೆಯಿಂದ ಬಂದಿದ್ದ ಮಾರುತಿ ಇಕೋ ನಿಂತಿದ್ದ ಕಾರ್​ ಮತ್ತು ಆಟೋಗೆ ಡಿಕ್ಕಿ ಹೊಡೆದಿದೆ. ಮೊದಲು ರಸ್ತೆ ಬದಿ ನಿಂತಿದ್ದ ಒರ್ವನಿಗೆ ಹಾಗೂ ಡಿಯೋ ಸ್ಕೂಟರ್​ನಲ್ಲಿದ್ದ ಇಬ್ಬರಿಗೆ ಡಿಕ್ಕಿ ಹೊಡೆದಿದೆ.

ಇನ್ನೂ ಈ ಒಂದು ಅಪಘಾತ ಸಂಭವಿಸಿದ ನಂತರ ಇಬ್ಬರು ಎಸ್ಕೇಪ್ ಒರ್ವ ನನ್ನು ಸ್ಥಳೀಯರು ಹಿಡಿದಿದ್ದಾರೆ.ಅಪಘಾತದ ಬಳಿಕ ಸ್ಥಳೀಯರು ಕಾರ್ ತಡೆದು ನಿಲ್ಲಿಸಿದ್ದಾರೆ. ಮೂವರ ಪೈಕಿ ಇಬ್ಬರು ಕಾರ್ ಸಮೇತ ಎಸ್ಕೇಪ್ ಆಗಿದ್ದಾರೆ ಆಕಾಶ್ ಎಂಬಾತನನ್ನು ಹಿಡಿಯುವಲ್ಲಿ ಸ್ಥಳೀಯರು ಯಶಸ್ವಿಯಾಗಿದ್ದು ಪೊಲೀಸರ ವಶಕ್ಕೆ ನೀಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.