ಅತ್ತಿಬೆಲೆ ಪಟಾಕಿ ದುರಂತ ಮತ್ತೋರ್ವ ಸಾವು – ಏರಿಕೆಯಾಗುತ್ತಲೆ ಇದೆ ಮೃತರ ಸಂಖ್ಯೆ ಈವರೆಗೆ ಸಾವಿಗೀಡಾದವರು 17 ಕ್ಕೆ ಏರಿಕೆ…..

Suddi Sante Desk
ಅತ್ತಿಬೆಲೆ ಪಟಾಕಿ ದುರಂತ ಮತ್ತೋರ್ವ ಸಾವು – ಏರಿಕೆಯಾಗುತ್ತಲೆ ಇದೆ ಮೃತರ ಸಂಖ್ಯೆ ಈವರೆಗೆ ಸಾವಿಗೀಡಾದವರು 17 ಕ್ಕೆ ಏರಿಕೆ…..

ಬೆಂಗಳೂರು

ಅತ್ತಿಬೆಲೆ ಪಟಾಕಿ ದುರಂತ ಏರುತ್ತಲೆ ಇದೆ ಮೃತರ ಸಂಖ್ಯೆ – ಏರಿಕೆಯಾಗುತ್ತಲೆ ಇದೆ ಮೃತರ ಸಂಖ್ಯೆ ಈವರೆಗೆ ಸಾವಿಗೀಡಾದವರ ಸಂಖ್ಯೆ 17 ಕ್ಕೆ ಏರಿಕೆ

ಬೆಂಗಳೂರಿನ ಅತ್ತಿಬೆಲೆ ಪಟಾಕಿ ಅಗ್ನಿ ದುರಂತ ಪ್ರಕರಣ ಕುರಿತಂತೆ ಮೃತರ ಸಂಖ್ಯೆ ಹೆಚ್ಚಾಗುತ್ತಿದೆ ಹೌದು ಇಂದು ಮತ್ತೊರ್ವ ಚಿಕಿತ್ಸೆ ಫಲಿಸದೇ ಮೃತನಾಗಿದ್ದು ಹೀಗಾಗಿ ಘಟನೆಯಲ್ಲಿ ಮೃತರ ಸಂಖ್ಯೆ 17 ಕ್ಕೆ ಏರಿಕೆಯಾದಂತಾಗಿದೆ. ಅತ್ತಿಬೆಲೆ ಪಟಾಕಿ ಅಗ್ನಿ ದುರಂತದಲ್ಲಿ ಗಾಯಗೊಂಡಿದ್ದ ರಾಜೇಶ್ ಎನ್ನುವ ಯುವಕ ಇಂದು ಚಿಕಿತ್ಸೆ ಫಲ ಕಾರಿಯಾಗದೇ ಸಾವಿಗೀಡಾಗಿದ್ದಾರೆ.

ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ ಇದರೊಂದಿಗೆ ಸಾವಿನ ಸಂಖ್ಯೆ 17ಕ್ಕೆ ಏರಿಕೆಯಾದಂತಾಗಿದ್ದು ಇದೇ ಅಕ್ಟೋಬರ್ 07 ರಂದು ಬೆಂಗಳೂರಿನ ಅತ್ತಿಬೆ ಲೆಯಲ್ಲಿ ಪಟಾಕಿ ಗೋದಾಮಿನಲ್ಲಿ ಅಗ್ನಿ ದುರಂತ ಸಂಭವಿಸಿತ್ತು. ಪರಿಣಾಮ ಅಂದೇ 15 ಜನ ಸಜೀವ ದಹನವಾಗಿದ್ದು ಮೂವರು ಗಂಭೀರ ವಾಗಿ ಗಾಯಗೊಂಡಿದ್ದರು.

ಗಾಯಾಳುಗಳಲ್ಲಿ ಈಗಾಗಲೇ ವೆಂಕಟೇಶ್ ಮೃತಪಟ್ಟಿದ್ದು ಮತ್ತೆ ಇನ್ನೋರ್ವ ಯುವಕ ರಾಜೇಶ್ ಸಾವನ್ನಪ್ಪಿದ್ದಾನೆ.ಈ ಮೂಲಕ ಗಾಯ ಗೊಂಡವರಲ್ಲಿ ಇಬ್ಬರು ಮೃತಪಟ್ಟಿದ್ದು ಇನ್ನೋರ್ವ ಗಾಯಾಳು ಅಂಗಡಿ ಮಾಲೀಕ ನವೀನ್ ಚಿಕಿತ್ಸೆ ಪಡೆಯುತ್ತಿದ್ದಾರೆ.ಇತ್ತ ಈ ಒಂದು ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವಹಿಸಿದ್ದು ತನಿಖೆ ಚುರುಕುಗೊಂಡಿದ್ದು ಏನೇನಾ ಗುತ್ತದೆ ಎಂಬೊದನ್ನು ಕಾದು ನೋಡಬೇಕಿದೆ.

ಉದಯ ವಾರ್ತೆ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.