This is the title of the web page
This is the title of the web page

Live Stream

[ytplayer id=’1198′]

August 2025
T F S S M T W
 123456
78910111213
14151617181920
21222324252627
28293031  

| Latest Version 8.0.1 |

Local News

ಶಿಕ್ಷಕರ ಸಮಸ್ಯೆ ಗಳ ಕುರಿತು ಧ್ವನಿ ಎತ್ತಿದ KSPSTA ಧಾರವಾಡ ತಾಲೂಕಾ ಘಟಕದವರು…..

WhatsApp Group Join Now
Telegram Group Join Now

ಧಾರವಾಡ –

ಭೇಟಿಯಾಗಿ ಅವರಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(KSPSTA)ಧಾರವಾಡ ತಾಲೂಕಾ ಘಟಕದವತಿಯಿಂದ ಶಿಕ್ಷಕರಿಗೆ ಗಳಿಕೆ ರಜೆ ಮಂಜೂರು ಮಾಡಲು ಮನವಿಯನ್ನು ಸಲ್ಲಿಸ ಲಾಯಿತು.ಕೋವಿಡ್-19 ಡ್ಯೊಟಿ ಮಾಡಿದ ಶಿಕ್ಷಕರಿಗೆ E L ಮಂಜೂರು ಮಾಡಲು KSPSTA ಧಾರವಾಡ ತಾಲೂಕಾ ಘಟಕದಿಂದ ಮನವಿಯನ್ನು ನೀಡಲಾ ಯಿತು.ಹೌದು ಈ ಹಿಂದೆ ಕೊವಿಡ್-19 ಸಂದರ್ಭ ದಲ್ಲಿ ಶಿಕ್ಷಕ/ಶಿಕ್ಷಕಿಯರು ಚೆಕ್ ಪೊಸ್ಟ್ ಹಾಗೂ ಆರೋಗ್ಯದ ಕುರಿತು ಮನೆ ಮನೆ ಸಮೀಕ್ಷೆ ಮಾಡುವ ಸಲುವಾಗಿ ಎಪ್ರಿಲ್ ಮತ್ತು ಮೇ ತಿಂಗಳ ಲ್ಲಿ ನಿಯೋಜನೆ ಹೊಂದಿ ರಜೆಯ ಸಮಯದಲ್ಲಿ ಕರ್ತವ್ಯ ನಿರ್ವಹಿಸಿದರ ಪ್ರಯುಕ್ತ ಶಿಕ್ಷಕರಿಗೆ ಗಳಿಕೆ ರಜೆ ನೀಡಲು ಧಾರವಾಡದ ತಹಶೀಲ್ದಾರಾದ ಸಂತೋಷ ಬಿರಾದಾರ ಅವರಿಗೆ ಮನವಿ ನೀಡಲಾಯಿತು.

ನಿಯೋಜಿಸುವಾಗ ಗರ್ಭಿಣಿಯರು, ವೈದ್ಯಕೀಯ ಪ್ರಕರಣದಡಿ,ವಿಕಲಚೇತನರು ಹಾಗೂ 50ವರ್ಷ ಮೇಲ್ಪಟ್ಟ ಶಿಕ್ಷಕರಿಗೆ ವಿನಾಯತಿ ನೀಡಲು ಕೋರಿ ಮನವಿ ಸಲ್ಲಿಸಲಾಯಿತು. ಅಜಿತಕುಮಾರ ದೇಸಾಯಿ ಇವರ ನೇತೃತ್ವದಲ್ಲಿ ಈ ಒಂದು ಮನವಿ ನೀಡುವ ಕಾರ್ಯಕ್ರಮ ನಡೆಯಿತು.

ಈ ಒಂದು ಸಮಯದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ ಹೊನ್ನಪ್ಪನವರ ಜಿಲ್ಲಾ ಗೌರವಾಧ್ಯ. ಕ್ಷರಾದ S.B.ಕೇಸರಿ,ತಾಲೂಕಾ ಅಧ್ಯಕ್ಷ ರಾದ ಅಜೀತ ಕುಮಾರ ದೇಸಾಯಿ ತಾಲೂಕಾ ಪ್ರಧಾನ ಕಾರ್ಯದರ್ಶಿ ಗಳಾದ N.S ಕಮ್ಮಾರ ಉಪಾಧ್ಯಕ್ಷರಾದ ರಾಜೇಸಾಬ ಮುನವಳ್ಳಿ, BRP ಬಸವರಾಜ ದೇಸೂರ,CRP ಗಳಾದ M.D.ಹೊಸಮನಿ A. A.ಚಕೋಲಿ ಸಂಘದ ವಿವಿಧ ಹಂತದ ಪದಾಧಿಕಾರಿ ಗಳಾದ K.M.ಬೊಂಗಾಳೆ ಅಶೋಕ್ ಕುರ್ತಕೋಟಿ ಉಪಸ್ಥಿತರಿದ್ದರು.


Google News

 

 

WhatsApp Group Join Now
Telegram Group Join Now
Suddi Sante Desk