ಹುಲಿ ಉಗುರಿನ ಚಕ್ರವ್ಯೂಹದಲ್ಲಿ ಅರಣ್ಯ ಇಲಾಖೆಯ ಅಧಿಕಾರಿ – ಅರಣ್ಯ ಇಲಾಖೆಯ ಅಧಿಕಾರಿ ಮೇಲೆ ದಾಖಲಾಯಿತು ದೂರು ಬಂಧನ…..

Suddi Sante Desk
ಹುಲಿ ಉಗುರಿನ ಚಕ್ರವ್ಯೂಹದಲ್ಲಿ ಅರಣ್ಯ ಇಲಾಖೆಯ ಅಧಿಕಾರಿ – ಅರಣ್ಯ ಇಲಾಖೆಯ ಅಧಿಕಾರಿ ಮೇಲೆ ದಾಖಲಾಯಿತು ದೂರು ಬಂಧನ…..

ಚಿಕ್ಕಮಗಳೂರು

ಹುಲಿ ಉಗುರಿನ ಚಕ್ರವ್ಯೂಹದಲ್ಲಿ ಅರಣ್ಯ ಇಲಾಖೆಯ ಅಧಿಕಾರಿ – ಅರಣ್ಯ ಇಲಾಖೆಯ ಅಧಿಕಾರಿ ಮೇಲೆ ದಾಖಲಾಯಿತು ದೂರು ಬಂಧನ ಹೌದು ರಾಜ್ಯದಲ್ಲಿ ಸಧ್ಯ ಏನೇ ಇದ್ದರೂ ಹುಲಿ ಉಗರಿನ ವಿಚಾರ ತುಂಬಾ ಸದ್ದು ಮಾಡು ತ್ತಿದ್ದು ಎಲ್ಲಿ ನೋಡಿದಲ್ಲಿ ಕೇಳಿದಲ್ಲಿ ಈ ಒಂದು ಹುಲಿ ಉಗುರು ಧರಿಸಿರುವ ವಿಚಾರವೇ ತುಂಬಾ ಚರ್ಚೆಯಾಗುತ್ತಿದ್ದು ಇತ್ತ ಕಾಫಿನಾಡಿಗೆ ಹುಲಿ ಉಗುರಿನ ಕಂಟಕ ಕಾಲಿಟ್ಟಿದೆ

ಹುಲಿ ಉಗುರು ಧರಿಸಿದ್ದ ಸಾಲು-ಸಾಲು ಜನರ ಬಂಧನದ ಬೆನ್ನಲ್ಲೇ ಅರಣ್ಯ ಇಲಾಖೆಯ ಅಧಿ ಕಾರಿಯ ಮೇಲೂ ಈ ಒಂದು ಪ್ರಕರಣ ಕೇಳಿ ಬಂದಿದೆ.ಹುಲಿ ಉಗುರಿನ ಹುರುಳಲ್ಲಿ ಅರಣ್ಯ ಅಧಿಕಾರಿ ಸುತ್ತುಕೊಂಡಿದ್ದು ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಮೇಲೂ ದೂರು ದಾಖಲಾಗಿದೆ.ಹುಲಿ ಉಗುರು ಧರಿಸಿದ್ದಾರೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಸಾರ್ವಜನಿಕರಿಬ್ಬರು ದೂರನ್ನು ನೀಡಿದ್ದಾರೆ.ವನ್ಯ ಜೀವಿ ಕಾಯ್ದೆಯಲ್ಲಿ ಪ್ರಕರಣ ದಾಖಲಿಸುವಂತೆ ದೂರನ್ನು ನೀಡಲಾ ಗಿದೆ ಕಳಸದ ಡಿ.ಆರ್.ಎಫ್.ಓ.ದರ್ಶನ್ ವಿರುದ್ದ ದೂರನ್ನು ನೀಡಲಾಗಿದೆ.

ಅರೆನೂರು ಗ್ರಾಮದ ಸುಪ್ರೀತ್,ಅಬ್ದುಲ್ ಎಂಬು ವವರಿಂದ ದೂರು ದಾಖಲಾಗಿದ್ದು ಈ ಕುರಿತಂತೆ ಆಲ್ದೂರು ವಲಯ ಅರಣ್ಯಾಧಿಕಾರಿಗೆ ದೂರು ನೀಡಿದ್ದಾರೆ ಸುಪ್ರಿತ್, ಅಬ್ದುಲ್ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಮೂಲದ ದರ್ಶನ್ ರಾಗಿದ್ದು ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಲಿಖಿತ ದೂರು ನೀಡಿದ್ದಾರೆ.ಇತ್ತ ಈ ಕುರಿತಂತೆ ತನಿಖೆಯನ್ನು ಕೈಗೊಂಡಿದ್ದು ಬಂಧನ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಸುದ್ದಿ ಸಂತೆ ನ್ಯೂಸ್ ಚಿಕ್ಕಮಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.