ಅನುದಾನ ಅಭಿವೃದ್ದಿ ವಿಚಾರದಲ್ಲಿ ರಾಜಕಾರಣ ಮಾಡೊದು ತಪ್ಪು ರಾಜು ನಾಯಕವಾಡಿ – ವಯಕ್ತಿಕವಾಗಿ ರಾಜಕಾರಣವಿರಲಿ ಅನುದಾನ ತರುವುದರಲ್ಲಿ ಅಭಿವೃದ್ದಿ ಮಾಡೊದರಲ್ಲಿ ರಾಜಕಾರಣ ಮಾಡಬೇಡಿ ಎಂದ ರಾಜು ನಾಯಕವಾಡಿ…..

Suddi Sante Desk
ಅನುದಾನ ಅಭಿವೃದ್ದಿ ವಿಚಾರದಲ್ಲಿ ರಾಜಕಾರಣ ಮಾಡೊದು ತಪ್ಪು ರಾಜು ನಾಯಕವಾಡಿ – ವಯಕ್ತಿಕವಾಗಿ ರಾಜಕಾರಣವಿರಲಿ ಅನುದಾನ ತರುವುದರಲ್ಲಿ ಅಭಿವೃದ್ದಿ ಮಾಡೊದರಲ್ಲಿ ರಾಜಕಾರಣ ಮಾಡಬೇಡಿ ಎಂದ ರಾಜು ನಾಯಕವಾಡಿ…..

ಹುಬ್ಬಳ್ಳಿ

ಅನುದಾನ ಅಭಿವೃದ್ದಿ ವಿಚಾರದಲ್ಲಿ ರಾಜಕಾರಣ ಮಾಡೊದು ತಪ್ಪು ರಾಜು ನಾಯಕವಾಡಿ  ವಯಕ್ತಿಕವಾಗಿ ರಾಜಕಾರಣವಿರಲಿ ಅನುದಾನ ತರುವುದರಲ್ಲಿ ಅಭಿವೃದ್ದಿ ಮಾಡೊದರಲ್ಲಿ ರಾಜಕಾರಣ ಮಾಡಬೇಡಿ ಎಂದ ರಾಜು ನಾಯಕ ವಾಡಿ. ಹೌದು

ಹುಬ್ಬಳ್ಳಿ ಧಾರವಾಡ ಸೇರಿದಂತೆ ಜಿಲ್ಲೆಯ ರಾಜಕಾರಣಿಗಳಿಗೆ ಯುವ ಮುಖಂಡ ಸಾಮಾಜಿಕ ಹೋರಾಟಗಾರ ರಾಜು ನಾಯಕ ವಾಡಿ ಖಡಕ್ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ.ಹೌದು ಪತ್ರಿಕಾ ಪ್ರಕಟಣೆಯ ಮೂಲಕ ಹೇಳಿಕೆ ನೀಡಿರುವ ಅವರು ಅಭಿವೃದ್ದಿ ನೆಪದಲ್ಲಿ ಹುಬ್ಬಳ್ಳಿ ಹಾಳಾಗಿ ಹೋಗುತ್ತಿದೆ ಹೃದಯಭಾಗವಾಗಿರುವ ಚನ್ನಮ್ಮ ಸರ್ಕಲ್ ಸೇರಿದಂತೆ ಎಲ್ಲೇಂದರಲ್ಲಿ ಸಿಕ್ಕಾಪಟ್ಟಿ ತೆಗ್ಗು ಗಳನ್ನು ಅಗೆದು ಸೌಂದರ್ಯ್ಯವನ್ನು ಹಾಳು ಮಾಡಿದ್ದಾರೆ.

ಎಲ್ಲೇಂದರಲ್ಲಿ ಧೂಳು ತೆಗ್ಗು ಸರಿಯಾದ ರಸ್ತೆಗಳು ಇಲ್ಲದೇ ಇರುವಂತಹ ಪರಸ್ಥಿತಿ ನಗರದಲ್ಲಿ ಕಂಡು ಬರುತ್ತಿದೆ.ಈ ನಡುವೆ ಅಭಿವೃದ್ದಿ ನೆಪದಲ್ಲಿ ರಾಜ ಕಾರಣ ಮಾಡಲಾಗುತ್ತಿದೆ ಕ್ಷೇತ್ರಕ್ಕೆ ಬರುವ ಅನು ದಾನವನ್ನು ತಡೆಹಿಡಿಯಲಾಗುತ್ತಿದೆ ಎಂದು ಶಾಸಕ ಮಹೇಶ್ ತೆಂಗಿನಕಾಯಿ ಹೇಳಿದ್ದು ಈ ಒಂದು ವಿಚಾರ ಕುರಿತಂತೆ ರಾಜು ನಾಯಕವಾಡಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಪ್ರಕಟಣೆಯ ಮೂಲಕ ಹೇಳಿಕೆ ನೀಡಿದ್ದು ಅವಳಿ ನಗರದ ಜನಪ್ರತಿನಿಧಿಗಳೇ ಅನುದಾನ ತರುವು ಅಭಿವೃದ್ದಿ ಮಾಡುವ ವಿಚಾರದಲ್ಲಿ ಯಾವತ್ತು ರಾಜಕಾರಣ ಮಾಡಬೇಡಿ ಎಂದು ಕಿವಿಮಾತನ್ನು ಹೇಳಿದ್ದಾರೆ.ಅನುದಾನ ತರಲು ಆಗದಿದ್ದರೆ ಅಭಿವೃದ್ದಿ ಮಾಡಲು ಆಗದಿದ್ದರೆ ರಾಜೀನಾಮೆಯನ್ನು ನೀಡಿ ಕುರ್ಚಿ ಕಾಲಿ ಮಾಡಿ ಎಂದಿದ್ದಾರೆ.ಇದನ್ನೇಲ್ಲವನ್ನು ನೋಡುತ್ತಿದ್ದರೆ ಇವರೇನು ರಾಜಕಾರಣಿಗಳಾ ಏನು ಎಂಬೊ ದನ್ನು ಉತ್ತರಿಸಲಿ ಎಂದು ರಾಜು ನಾಯಕವಾಡಿ ಒತ್ತಾಯವನ್ನು ಮಾಡಿದ್ದಾರೆ.

ಇನ್ನೂ ಅವಳಿ ನಗರಗಳಿಗೆ ಮೇಲಿಂದ ಮೇಲೆ ಸಾಕಷ್ಟು ಪ್ರಮಾಣದಲ್ಲಿ ಯೋಜನೆಗಳು ಬರು ತ್ತಿದ್ದು ಕೋಟಿ ಕೋಟಿ ರೂಪಾಯಿ ಕೂಡಾ ಅನುದಾನದ ರೂಪದಲ್ಲಿ ಬರುತ್ತಿದ್ದು ಇದನ್ನೇ ಲ್ಲವನ್ನು ಸರಿಯಾಗಿ ಉಪಯೋಗ ಮಾಡಿ ಕೊಳ್ಳಬೇಕು ಎಂದು ಕಿವಿಮಾತನ್ನು ಹೇಳಿದರು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.