ವಸತಿ ಶಾಲೆಯ ವಾರ್ಡನ್ ಅಮಾನತು – ಸಾಕಷ್ಟು ದೂರುಗಳ ಹಿನ್ನಲೆಯಲ್ಲಿ ಅಮಾನತು ದೊಂದಿಗೆ ಎತ್ತಂಗಡಿ ಮಾಡಿ ಆದೇಶ ಮಾಡಿದ CEO…..

Suddi Sante Desk
ವಸತಿ ಶಾಲೆಯ ವಾರ್ಡನ್ ಅಮಾನತು – ಸಾಕಷ್ಟು ದೂರುಗಳ ಹಿನ್ನಲೆಯಲ್ಲಿ ಅಮಾನತು ದೊಂದಿಗೆ ಎತ್ತಂಗಡಿ ಮಾಡಿ ಆದೇಶ ಮಾಡಿದ CEO…..

ಹಾವೇರಿ

ವಸತಿ ಶಾಲೆಯ ವಾರ್ಡನ್ ಅಮಾನತು  ಸಾಕಷ್ಟು ದೂರುಗಳ ಹಿನ್ನಲೆಯಲ್ಲಿ ಅಮಾನತು ದೊಂದಿಗೆ ಎತ್ತಂಗಡಿ ಮಾಡಿ ಆದೇಶ ಮಾಡಿದ CEO ಹೌದು

ವಸತಿ ಶಾಲೆಯೊಂದರ ವಾರ್ಡನ್ ರೊಬ್ಬರನ್ನು ಅಮಾನತು ಮಾಡಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.ಜಿಲ್ಲೆಯ ರಾಣೆಬೆನ್ನೂರಿನ ಡಾ.ಬಿ.ಆರ್‌. ಅಂಬೇಡ್ಕರ್‌ ಮೆಟ್ರಿಕ್‌ ಪೂರ್ವ ವಸತಿ ಶಾಲೆಯ ಮಕ್ಕಳಿಗೆ ಗುಣಮಟ್ಟದ ಆಹಾರ ನೀಡದೆ ಕಿರು ಕುಳ ನೀಡಿರುವ ಆರೋಪದ ಮೇರೆಗೆ ವಾರ್ಡನ್‌ ಸವಿತಾ ಬಣಕಾರ ಅವರನ್ನು ಜಿಲ್ಲಾ ಪಂಚಾಯಿತಿ ಸಿಇಒ ಅಕ್ಷಯ ಶ್ರೀಧರ ಅಮಾನತು ಮಾಡಿದ್ದಾರೆ

ವಸತಿ ಶಾಲೆಯ ಮಕ್ಕಳಿಗೆ ಕೋಲಿನಿಂದ ಹೊಡೆದು ಗಾಯಗೊಳಿಸಿದ್ದಾರೆ.ಊಟ ಮತ್ತು ವಸತಿ ಸೌಲಭ್ಯವನ್ನು ಸಮರ್ಪಕವಾಗಿ ಕಲ್ಪಿಸದೆ ಮಕ್ಕಳಿಗೆ ಕಿರುಕುಳ ನೀಡಿದ್ದಾರೆ ಎಂಬ ಮಕ್ಕಳ ಆರೋಪದ ಮೇರೆಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಮಾಂತೇಶ ಬಸವನಾಯ್ಕರ್‌ ಅವರು ದೂರು ನೀಡಿದ್ದರು.ಈ ಒಂದು ವಿಚಾರ ಕುರಿತಂತೆ ರಾಣೆಬೆನ್ನೂರು ನಗರ ಠಾಣೆಯಲ್ಲಿ ಸವಿತಾ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಇನ್ನೂ ವಸತಿ ಶಾಲೆಯ ಅವ್ಯವಸ್ಥೆ ಹಾಗೂ ಹುಷಾರಿಲ್ಲದ ಮಕ್ಕಳನ್ನು ಆಸ್ಪತ್ರೆಗೆ ಕರೆದೊ ಯ್ಯದೆ ನಿರ್ಲಕ್ಷ್ಯ ತೋರಿರುವ ವಾರ್ಡನ್‌ ಸವಿತಾ ಬಣಕಾರ ಅವರ ವಿರುದ್ಧ ಮೇಲಧಿಕಾರಿಗಳಿಗೆ ಆರೋಪಗಳ ಕುರಿತಂತೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರೇಷ್ಮಾ ಕೌಸರ್‌ ಬೇಗಂ ಅವರು ಕಾರಣ ಕೇಳಿ ನೋಟಿಸ್‌ ನೀಡಿದ್ದರು.

ರಾಣೆಬೆನ್ನೂರು ವಸತಿ ಶಾಲೆಗೆ ನಿಯೋಜನೆಗೊಂ ಡಿದ್ದ ಆದೇಶವನ್ನು ಹಿಂಪಡೆದು ಹಾವೇರಿ ನಗರದ ಭಾರತ ರತ್ನ ಡಾ.ಬಿ.ಆರ್‌. ಅಂಬೇಡ್ಕರ್‌ ಶಾಲೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ವಾರ್ಡನ್‌ ವಿರುದ್ಧ ವಸತಿ ಶಾಲೆಯ ಮಕ್ಕಳು ಎಸ್‌ಎಫ್‌ಐ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿದ್ದರು.

ಸುದ್ದಿ ಸಂತೆ ನ್ಯೂಸ್ ಹಾವೇರಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.