7ನೇ ವೇತನ ಆಯೋಗದ ವರದಿ ಸ್ವೀಕಾರ ಮಾಡಿದ್ರೆ ಏನಾಗುತ್ತದೆ – ಎಲ್ಲವೂ ಸಿದ್ದವಾಗಿರುವಾಗ ಮೀನಾಮೇಷ ಯಾಕೆ…..ಹುಟ್ಟುಕೊಂಡಿವೆ ಹಲವು ಅನುಮಾನಗಳು…..

Suddi Sante Desk
7ನೇ ವೇತನ ಆಯೋಗದ ವರದಿ ಸ್ವೀಕಾರ ಮಾಡಿದ್ರೆ ಏನಾಗುತ್ತದೆ – ಎಲ್ಲವೂ ಸಿದ್ದವಾಗಿರುವಾಗ ಮೀನಾಮೇಷ ಯಾಕೆ…..ಹುಟ್ಟುಕೊಂಡಿವೆ ಹಲವು ಅನುಮಾನಗಳು…..

ಬೆಂಗಳೂರು

7ನೇ ವೇತನ ಆಯೋಗದ ವರದಿ ಸ್ವೀಕಾರ ಮಾಡಿದ್ರೆ ಏನಾಗುತ್ತದೆ – ಎಲ್ಲವೂ ಸಿದ್ದವಾಗಿ ರುವಾಗ ಮೀನಾಮೇಷ ಯಾಕೆ….. ಹುಟ್ಟುಕೊಂ ಡಿವೆ ಹಲವು ಅನುಮಾನಗಳು

ರಾಜ್ಯದ ಸಮಸ್ತ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಕುರಿತಂತೆ ಈಗಾಗಲೇ ರಾಜ್ಯ ಸರ್ಕಾರ ಇದಕ್ಕಾಗಿ 7ನೇ ವೇತನ ಆಯೋಗವನ್ನು ರಚನೆ ಮಾಡಲಾಗಿದೆ.ಈ ಒಂದು ಆಯೋಗವನ್ನು ರಚನೆ ಮಾಡಿ ವರ್ಷವೇ ಕಳೆದು ಮತ್ತೆ ಎರಡು ಬಾರಿ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.

ವರದಿ ಸಲ್ಲಿಸಲು ಮೊದಲು ಆರು ತಿಂಗಳ ಕಾಲ ಸಮಯಾಕಾಶವನ್ನು ನೀಡಲಾಗಿತ್ತು ಮತ್ತೆ ಒಂದು ಬಾರಿ ಸಧ್ಯ ರಾಜ್ಯದಲ್ಲಿ ಹೊಸದಾಗಿ ಸರ್ಕಾರ ರಚನೆಯಾಗಿದ್ದು ಎಲ್ಲಾ ಮುಗಿಯಿತು ಇನ್ನೇನು ವರದಿಯನ್ನು ಸಮಿತಿ ನೀಡುತ್ತದೆ ಎನ್ನುವಷ್ಟರಲ್ಲಿ ಯೇ ಮತ್ತೊಮ್ಮೆ ಈ ಒಂದು ಸಮಿತಿಯ ಅವಧಿ ಯನ್ನು ಆರು ತಿಂಗಳ ಕಾಲ ಅವಧಿಯನ್ನು ವಿಸ್ತರಣೆ ಮಾಡಿ ಆದೇಶ ಮಾಡಲಾಗಿದೆ.

ಇದು ಒಂದು ವಿಚಾರವಾದರೆ ಇನ್ನೂ ಪ್ರಮುಖ ವಾಗಿ ಈಗಾಗಲೇ ಸಮಿತಿ ವರದಿಯನ್ನು ಸಂಪೂರ್ಣವಾಗಿ ಸಿದ್ದತೆಯನ್ನು ಮಾಡಿದ್ದು ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ ಎಂದುಕೊಂಡಿದ್ದ ರಾಜ್ಯದ ಸಮಸ್ತ ಸರ್ಕಾರಿ ನೌಕರರಿಗೆ ಮತ್ತೊಂದು ಶಾಕ್ ಎದುರಾಗಿದೆ.ಈಗಾಗಲೇ 7ನೇ ವೇತನ ಆಯೋಗದ ಸಮಿತಿಯು ರಾಜ್ಯದ ಸಮಸ್ತ ಸರ್ಕಾರಿ ನೌಕರರ ಕಂಪ್ಲೀಟ್ ಮಾಹಿತಿ ಯನ್ನು ಪಡೆದುಕೊಂಡು ವರದಿಯನ್ನು ಸಿದ್ದಮಾಡಿದೆ.

ರಾಜ್ಯ ಸರ್ಕಾರಕ್ಕೆ ಈ ಒಂದು ವರದಿಯನ್ನು ಸಲ್ಲಿಕೆ ಮಾಡಲು ಕೂಡಾ ಪ್ಲಾನ್ ಮಾಡಿಕೊಂ ಡಿದ್ದು ಹೀಗಿರುವಾಗ ರಾಜ್ಯ ಸರ್ಕಾರ ಅವಧಿ ಯನ್ನು ಮತ್ತೆ ಯಾತಕ್ಕಾಗಿ ವಿಸ್ತರಣೆ ಮಾಡಿತ್ತು ಸಮಿತಿಯಿಂದ ಯಾಕೇ ಈ ಒಂದು ವಿಚಾರ ಕುರಿತಂತೆ ಸ್ಪಷ್ಟನೆ ಮಾಹಿತಿ ರಾಜ್ಯದ ಸಮಸ್ತ ಸರ್ಕಾರಿ ನೌಕರರಿಗೆ ಸಿಗಲಿಲ್ಲ ಈ ಎಲ್ಲಾ ವಿಚಾರ ಕುರಿತಂತೆ ಸಾಕಷ್ಟು ಪ್ರಮಾಣದಲ್ಲಿ ಪ್ರಶ್ನೆಗಳು ಹುಟ್ಟುಕೊಂಡಿದ್ದು

ಇನ್ನೂ ಕೂಡಾ ಈ ಒಂದು ವಿಚಾರ ಕುರಿತಂತೆ ಸ್ಪಷ್ಟನೆ ಸ್ಪಷ್ಟವಾದ ಮಾಹಿತಿ ವಿಚಾರ ರಾಜ್ಯದ ಸಮಸ್ತ ಸರ್ಕಾರಿ ನೌಕರರಿಗೆ ಸಿಗುತ್ತಿಲ್ಲ ಇದರಿಂ ದಾಗಿ ಇನ್ನೂ ಕೂಡಾ 7ನೇ ವೇತನ ಆಯೋಗದ ವರದಿ ಯಾವಾಗ ಸಲ್ಕಿಕೆಯಾಗುತ್ತದೆ ಯಾವಾಗ ಜಾರಿಗೆ ಬರುತ್ತದೆ ಎಂಬೊದು ಕೂಡಾ ಗೊಂದಲ ವಾಗಿದೆ.

ಒಂದು ವೇಳೆ ಈ ಒಂದು 7ನೇ ರಾಜ್ಯ ವೇತನ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಸ್ವೀಕಾರ ಮಾಡಿದರೆ ಸರ್ಕಾರಿ ನೌಕರರು ವೇತನ ಪರಿಷ್ಕರಣೆಗೆ ಪಟ್ಟು ಹಿಡಿಯಲಿದ್ದಾರೆ. ಇದರಿಂ ದಾಗಿ ಸರ್ಕಾರಕ್ಕೆ ಸುಮಾರು 8 ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಆಗಲಿದೆ ಎಂಬ ಮಾತುಗಳು ವಿಧಾನಸೌಧದ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.

ಆದ್ದರಿಂದ ಸರ್ಕಾರ ಆಯೋಗದ ಅವಧಿಯನ್ನು ಮಾರ್ಚ್ ತನಕ ವಿಸ್ತರಣೆ ಮಾಡಿದ್ದು ಇತ್ತ ರಾಜ್ಯದ ಸಮಸ್ತ ಸರ್ಕಾರಿ ನೌಕರರ ಪರವಾಗಿ ರಾಜ್ಯ ಸರ್ಕಾರಿ ನೌಕರರ ಸಂಘಟನೆಯಿಂದ ಸಾಕಷ್ಟು ಪ್ರಮಾಣದಲ್ಲಿ ಒತ್ತಡವನ್ನು ಹಾಕಲಾ ಗುತ್ತಿದೆ.ಹೀಗಾಗಿ 7ನೇ ವೇತನ ಆಯೋಗದ ವರದಿ ಸಿದ್ದವಾಗಿದ್ದರು ಕೂಡಾ ರಾಜ್ಯ ಸರ್ಕಾರ ಯಾಕೆ ಸ್ವೀಕಾರವನ್ನು ಮಾಡುತ್ತಿಲ್ಲ ವಿಳಂಬಕ್ಕೆ ಕಾರಣವಾದ್ರು ಏನು ಈ ಎಲ್ಲಾ ಪ್ರಶ್ನೆಗಳಿಗೆ ರಾಜ್ಯದ ಮುಖ್ಯಮಂತ್ರಿಯವರೇ ಉತ್ತರಿಸ ಬೇಕಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

 

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.