ಗಣಪತಿ ನಮ್ಮ ಸಂಸ್ಕ್ರತಿಯಲ್ಲ ಎಂದ ಸಾಣೇಹಳ್ಳಿ ಸ್ವಾಮೀಜಿಗೆ ಗಣೇಶನ ಮೂರ್ತಿ ಕಳಿಸಿಕೊಟ್ಟ ಧಾರವಾಡದ ಕಲಾವಿದರು – ಕಲಾವಿದರ ಪರವಾಗಿ ಸ್ವಾಮೀಜಿಗೆ ಗಣೇಶನ ಮೂರ್ತಿಯನ್ನು ಕೋರಿಯರ್ ಮಾಡಿದ ಕಲಾವಿದ ಮಂಜುನಾಥ ಹಿರೇಮಠ…..

Suddi Sante Desk
ಗಣಪತಿ ನಮ್ಮ ಸಂಸ್ಕ್ರತಿಯಲ್ಲ ಎಂದ ಸಾಣೇಹಳ್ಳಿ ಸ್ವಾಮೀಜಿಗೆ ಗಣೇಶನ ಮೂರ್ತಿ ಕಳಿಸಿಕೊಟ್ಟ ಧಾರವಾಡದ ಕಲಾವಿದರು – ಕಲಾವಿದರ ಪರವಾಗಿ ಸ್ವಾಮೀಜಿಗೆ ಗಣೇಶನ ಮೂರ್ತಿಯನ್ನು ಕೋರಿಯರ್ ಮಾಡಿದ ಕಲಾವಿದ ಮಂಜುನಾಥ ಹಿರೇಮಠ…..

ಧಾರವಾಡ

ಗಣಪತಿ ನಮ್ಮ ಸಂಸ್ಕ್ರತಿಯಲ್ಲ ಎಂದ ಸಾಣೇಹಳ್ಳಿ ಸ್ವಾಮೀಜಿಗೆ ಗಣೇಶನ ಮೂರ್ತಿ ಕಳಿಸಿಕೊಟ್ಟ ಧಾರವಾಡದ ಕಲಾವಿದರು – ಕಲಾವಿದರ ಪರ ವಾಗಿ ಸ್ವಾಮೀಜಿಗೆ ಗಣೇಶನ ಮೂರ್ತಿಯನ್ನು ಕೋರಿಯರ್ ಮಾಡಿದ ಕಲಾವಿದ ಮಂಜುನಾಥ ಹಿರೇಮಠ

ಗಣಪತಿ ಪೂಜೆ ಆರಾಧನೆ ನಮ್ಮ ಸಂಸ್ಕ್ರತಿಯಲ್ಲ ಎಂದು ಹೇಳಿರುವ ಚಿತ್ರದುರ್ಗದ ಸಾಣೇಹಳ್ಳಿ ಸ್ವಾಮೀಜಿಗಳ ವಿರುದ್ದ ರಾಜ್ಯಾಧ್ಯಂತ ಅಕ್ರೋಶ ವ್ಯಕ್ತವಾಗುತ್ತಿದೆ.ಅದರಲ್ಲೂ ಗಣಪತಿ ಮೂರ್ತಿ ತಯಾರಕರು ಕೂಡಾ ಈ ಒಂದು ಸ್ವಾಮೀಜಿ ವಿರುದ್ದ ಸಿಡಿದೆದ್ದಿದ್ದು ಧಾರವಾಡದಲ್ಲೂ ಕೂಡಾ ಅಸಮಾಧಾನದ ಕಿಚ್ಚು ಕಂಡು ಬರುತ್ತಿದ್ದು ಕಲಾವಿದ ಮಂಜುನಾಥ ಹಿರೇಮಠ ಗಣೇಶನ ಮೂರ್ತಿ ಆರಾಧನೆ ವಿಚಾರ ಕುರಿತಂತೆ ಹಗುರ ವಾಗಿ ಮಾತನಾಡಿರುವ ಸಾಣೇಹಳ್ಳಿ ಸ್ವಾಮೀಜಿ ವಿರುದ್ದ ಬೇಸರವನ್ನು ವ್ಯಕ್ತಪಡಿಸಿದ್ದು

ಈಗ ಗಣೇಶನ ಮೂರ್ತಿಯನ್ನು ಕಳಿಸಿಕೊಡುವ ಮೂಲಕ ವಿಭಿನ್ನವಾಗಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.ಗಣೇಶನ ಮೂರ್ತಿ ಕುರಿತು ಬೇಸರದ ಮಾತುಗಳನ್ನು ಹೇಳಿದ ಈ ಒಂದು ಸ್ವಾಮಿಜೀಗೆ ಗಣೇಶ ಮೂರ್ತಿಯನ್ನು ಸಾಣೇ ಹಳ್ಳಿ ಸ್ವಾಮೀಜಿಗೆ ಕಳಿಸಿಕೊಟ್ಟಿದ್ದಾರೆ. ಚಿತ್ರದು ರ್ಗದ ಸಾಣೆಹಳ್ಳಿ ಶ್ರೀಗಳಿಗೆ ಎಲ್ಲಾ ಗಣೇಶನ ಭಕ್ತರ ಪರವಾಗಿ,ವೈಯಕ್ತಿಕವಾಗಿ ಮೂರ್ತಿ ಕಲಾವಿದರ ಪರವಾಗಿ ಹಬ್ಬಗಳನ್ನೇ ಆಶ್ರಯಿಸಿದ ಕುಟುಂಬಗಳ ಪರವಾಗಿ ಒಂದು ಗಣೇಶನ ವಿಗ್ರಹವನ್ನು ಕಲಾವಿದರ ಪರವಾಗಿ ಕಳುಹಿಸಿ ಕೊಟ್ಟಿದ್ದಾರೆ.

ಮೂರ್ತಿಯೊಂದಿಗೆ ಒಂದು ಪತ್ರವನ್ನು ಕೂಡಾ ಬರೆದು ಕಳುಹಿಸಿಕೊಟ್ಟಿದ್ದಾರೆ.ಗಣಪತಿಯ ಭಕ್ತರು ಸಹಿಮಾಡಿದ ಸುಂದರವಾಗಿ ಪ್ಯಾಕ್ ಮಾಡಿ ಕಳುಹಿಸಿಕೊಟ್ಟಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.