ಬೆಂಗಳೂರು –
ನಾಡಿನ ಶಿಕ್ಷಕರ ಸಮಸ್ಯೆ ಗಳನ್ನು ಮುಂದಿಟ್ಟುಕೊಂಡು ಶಿಕ್ಷಕ ಬಂಧುಗಳು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರ ಬಳಿ ಚರ್ಚೆ ಮಾಡಿ ಮನವಿ ನೀಡಲು ಹೋಗಿದ್ದಾರೆ. ಈ ಒಂದು ಸಮಯದಲ್ಲಿ ತಾಳ್ಮೆಯಿಂದ ಶಿಕ್ಷಕರು ಸಧ್ಯ ತಾವು ಅನುಭವಿಸುತ್ತಿರುವ ಸಮಸ್ಯೆಗಳನ್ನು ಏಳೆ ಏಳೆಯಾಗಿ ಹೇಳುತ್ತಿದ್ದಾರೆ
ಈ ಒಂದು ಸಮಯದಲ್ಲಿ ಶಿಕ್ಷಣ ಸಚಿವರು ಒಂದನೇ ಕ್ಲಾಸ್ ಗೆ ಪಾಠ ಮಾಡಿದ್ರೂ ಶಿಕ್ಷಕರೆ,ಏಳನೇ ತರಗತಿ ಗೆ ಪಾಠ ಮಾಡಿದ್ರೂ ಶಿಕ್ಷಕರೆ, ಮುಂದೆ NEP ಜಾರಿಗೆ ಬಂದ ಮೇಲೆ ನರ್ಸರಿ, LKG, UKG ಗೂ ಪಾಠ ಮಾಡಬೇಕಲ್ಲ ಅವಾಗ ಏನು ಮಾಡತಿರಿ ನೌಕರಿಯಂತೂ ಬಿಡಲು ಆಗಲ್ಲ ಎಂದರು
ಎಲ್ಲಿ ಪಾಠ ಮಾಡಿದ್ರೂ ಶಿಕ್ಷಕರು ಶಿಕ್ಷಕರೆ.ಸ್ವಲ್ಪ ಗೌರವ ಕಡಿಮೆ ಆದ್ರೂ ತಡೆದುಕೊಳ್ಳಬೇಕು. ಶಿಕ್ಷಕರು ಅನ್ಯಾಯ ಎಂಬ ಪದ ಉಪಯೋಗಿಸಬಾರದು ಎಂದರು