ರಾಜಕೀಯ ವಿಷಯ ಚರ್ಚೆಯ ವೇಳೆ ಚಾಕು ಇರಿತ – ಕುತ್ತಿಗೆಗೆ ಚಾಕು ಇರಿದ ದುಷ್ಕರ್ಮಿಗಳು

Suddi Sante Desk

ಸೇಡಂ-

ರಾಜಕೀಯ ವಿಷಯ ಕುರಿತಂತೆ ಚರ್ಚೆ ಮಾಡುವಾಗ ವ್ಯಕ್ತಿ.ಯೊಬ್ಬರಿಗೆ ಚಾಕುವಿನಿಂದ ಇರಿದ ಘಟನೆ ಬೀದರ್ ನಲ್ಲಿ ನಡೆದಿದೆ.

ಹೌದು ಗ್ರಾಮ ಪಂಚಾಯತಿಯ ರಾಜಕೀಯ ವಿಷಯದಲ್ಲಿ ನಡೆದ ಜಗಳದಲ್ಲಿ ವ್ಯಕ್ತಿಯೊರ್ವನಿಗೆ ಚಾಕು ಇರಿಯಲಾಗಿದೆ.

ಸೇಡಂ ತಾಲೂಕಿನ ಕೋಡ್ಲಾ‌ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಕೋಡ್ಲಾ‌ ಗ್ರಾಮದ ಚಹಾ ಅಂಗಡಿ ಬಳಿ ರಾಜಕೀಯ ಚರ್ಚೆಯ ವೇಳೆಯಲ್ಲಿ ಗ್ರಾಮದ ಶೇಖರ ಗುರುಲಿಂಗಪ್ಪ ಕೋಡ್ಲಾ ಅವರ ಕುತ್ತಿಗೆಗೆ ವೆಂಕಟರೆಡ್ಡಿ ಎಂಬಾತ ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗಿದೆ.

ಕೂಡಲೇ ದಾಳಿಗೊಳಗಾದ ಶೇಖರ ಎಂಬಾತನನ್ನು ಸೇಡಂನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಕಲಬುರಗಿಯ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ ಎಂದು ಸಿಪಿಐ ರಾಜಶೇಖರ ಹಳಗೋದಿ, ಪಿಎಸ್ಐ ನಾನಾಗೌಡ ತಿಳಿಸಿದ್ದಾರೆ.

ಇನ್ನೂ ಈ ಒಂದು ಪ್ರಕರಣ ಕುರುತಂತೆ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.