ಕುಡಿಯಲು ಹಣ ನೀಡಲಿಲ್ಲ ಅಂತಾ ಅಜ್ಜಿಯನ್ನೆ ಕೊಂದ ಮೊಮ್ಮಗ – ಆರೋಪಿ ಅಂದರ್

Suddi Sante Desk

ಚಿಕ್ಕಬಳ್ಳಾಪೂರ

ಕುಡಿಯಲು ಹಣ ಕೊಡಲಿಲ್ಲವೆಂದುಕೊಂಡು ಕಲ್ಲಿನಿಂದ ಜಜ್ಜಿ ಅಜ್ಜಿಯನ್ನೇ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪೂರದಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ ಜಿಲ್ಲೆ ಗೌರೀಬಿದನೂರು ತಾಲ್ಲೂಕಿನ ವೇದಲವೇಣಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಗ್ರಾಮದ ನರಸಮ್ಮ (68) ಕೊಲೆಯಾದ ವೃದ್ದೆಯಾಗಿದ್ದಾಳೆ.

ಗ್ರಾಮದ ನರಸಿಂಹಮೂರ್ತಿ (28 ) ಕೊಲೆ ಮಾಡಿದ ಆರೋಪಿ ಮೊಮ್ಮಗನಾಗಿದ್ದಾನೆ. ತನ್ನ ಅಜ್ಜಿಯ ಬಳಿ ಕುಡಿಯಲು ಹಣ ಕೇಳಿದ್ದ ಹಣ ನೀಡಲು ಅಜ್ಜಿ ನಿರಾಕರಿಸಿದ್ದರಂತೆ.

ಇದರಿಂದ ಸಿಟ್ಟಿಗೆದ್ದ ನರಸಿಂಹಮೂರ್ತಿ ಕಲ್ಲಿನಿಂದ ಜಜ್ಜಿ ಅಜ್ಜಿಯನ್ನು ಕೊಲೆ ಮಾಡಿದ್ದಾನೆ. ಇನ್ನೂ ವಿಷಯ ತಿಳಿದ ಗೌರಿಬಿದನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಸಧ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ಮಾಡ್ತಾ ಇದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.