ಸಿದ್ದಾರೂಢರ ಮಠದ ಹುಂಡಿಗೆ ಕಣ್ಣ ಹಾಕಿದ ಖದೀಮರು…..!

Suddi Sante Desk

ಹುಬ್ಬಳ್ಳಿ –

ಸಿದ್ದಾರೂಢ ದೇವಸ್ಥಾನದ ಬೀಗದ ಕೀ ಮುರಿದು ಹುಂಡಿಯನ್ನು ಕಳ್ಳತನ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ನಗರದ ಕುಸುಗಲ್ ರಸ್ತೆಯಲ್ಲಿರುವ ಸಿದ್ದಾರೂಢ ಮಠದಲ್ಲಿ ಹುಂಡಿ ಕಳ್ಳತನದ ಮಾಡಲಾಗಿದೆ.

ಹೌದ ಮುಂಜಾನೆಯ ಐದು ಗಂಟೆ ಸುಮಾರಿಗೆ ಸಿದ್ದರೂಡರ ಮಠಕ್ಕೆ ನುಗ್ಗಿದ ಕಳ್ಳರು ದೇವಸ್ಥಾನದಲ್ಲಿನ ಬಾಗಿಲಿಗೆ ಹಾಕಿರುವ ಬೀಗದ ಕೀ ಮುರಿದು ಕಳ್ಳತನ ಮಾಡಿದ್ದಾರೆ.

ಒಳಗಡೆ ಇದ್ದ ಹುಂಡಿ ಎತ್ತಿಕೊಂಡು ಪರಾರಿಯಾಗಿದ್ದು ಇದರಲ್ಲಿ ಸಾವಿರಾರು ದೇಣಿಗೆ ಹಣ ಸಂಗ್ರಹವಾಗಿತ್ತು ಎನ್ನಲಾಗಿದೆ.

ಇನ್ನೂ ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಎರಡನೇ ಬಾರಿಗೆ ಹೀಗೆ ಮಾಡಿದ್ದಾರೆ ಎಂದು ದೇವಸ್ಥಾನದ ಅರ್ಚಕರು ತಿಳಿಸಿದ್ದಾರೆ‌.

ಸಧ್ಯ ದೇವಸ್ಥಾನದ ಹುಂಡಿಯನ್ನು ಕಳ್ಳತನ ಮಾಡಲಾಗಿದೆ. ಈ ಹಿಂದೆ ಕೂಡಾ ಕಳ್ಳತನ ಮಾಡಲಾಗಿತ್ತು. ಸಧ್ಯ ಮತ್ತೊಮ್ಮೆ ಕಳ್ಳರು ಕಣ್ಣ ಹಾಕಿದ್ದು ವಿಷಯ ತಿಳಿದ ಹುಬ್ಬಳ್ಳಿಯ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.