ಕಲಬುರ್ಗಿ –
ಸರ್ಕಾರಿ ಶಾಲೆ ಆವರಣದಲ್ಲಿ ಟಿಪ್ಪು ಬೋರ್ಡ್ ಸ್ಥಾಪನೆ ಮಾಡಿದ ಘಟನೆ ಯೊಂದು ಕಲಬುರಗಿ ಯಲ್ಲಿ ಕಂಡು ಬಂದಿದೆ.ಹೌದು ಬೋರ್ಡ್ ತೆರವು ಗೊಳಿಸುವಂತೆ ಒತ್ತಾಯವನ್ನು ಕೂಡಾ ಮಾಡ ಲಾಗಿದೆ.ರಟಕಲ್ ಗ್ರಾಮದಲ್ಲಿರುವ ಸರ್ಕಾರಿ ಶಾಲಾ ಆವರಣದಲ್ಲಿರುವ ಶಾಲೆಯಲ್ಲಿ ಈ ಒಂದು ಬೋರ್ಡ್ ನ್ನು ಸ್ಥಾಪನೆ ಮಾಡಲಾಗಿದೆ.
ಅನಧಿಕೃತವಾಗಿ ಸ್ಥಾಪಿಸಲಾಗಿದೆ ಎಂದು ಹಿಂದೂ ಸಂಘಟನೆಗಳು ಆರೋಪವನ್ನು ಮಾಡಿವೆ.ಜ.15 ರಂದು ಹಿಂದು ಜಾಗೃತಿ ಸೇನೆಯಿಂದ 24 ಗಂಟೆ ಯಲ್ಲಿ ಬೋರ್ಡ್ ತೆಗೆಯುಂತೆ ಗಡುವನ್ನು ಕೂಡಾ ನೀಡಲಾಗಿದೆ.
ಗ್ರಾಮ ಪಂಚಾಯತಿ ಗೆ ಮನವಿಯನ್ನು ಸಲ್ಲಿಸಿ ಗಡುವನ್ನು ನೀಡಲಾಗಿದೆ.ಗ್ರಾ.ಪ ಯಿಂದ ತೆರವು ಕಾರ್ಯ ಮಾಡಿಲ್ಲ ಎಂದು ಮೋದಿಗೆ ಮನವಿ ಕೋಡಲು ನಿರ್ಧಾರವನ್ನು ಮಾಡಲಾಗಿದೆ.ಜ.19 ರಂದು ಮಳಖೇಡಕ್ಕೆ ಮೋದಿ ಆಗಮನ ಹಿನ್ನೆಲೆ ಯಲ್ಲಿ ಅಂದು ಬೋರ್ಡ್ ತೆರವು ಮಾಡುವಂತೆ ಮನವಿ ಸಲ್ಲಿಸಲಾಗುವುದು ಎಂದು ಸಂಘಟನೆ ಯವರು ಹೇಳಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಕಲಬುರಗಿ…..