ಸಂಕಲ್ಪ ಸಮಾವೇಶಕ್ಕೆ ಧಾರವಾಡದ ಮತ್ತೊಬ್ಬ ಮಾಜಿ ಸಚಿವರನ್ನು ಮರೆತ ‘ಕೈ’ ನಾಯಕರು – ಕಾದು ಕಾದು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ ಹಿರಿಯ ನಾಯಕ

Suddi Sante Desk

ಧಾರವಾಡ –

ಹುಬ್ಬಳ್ಳಿಯಲ್ಲಿ ಇಂದು ಕಾಂಗ್ರೆಸ್ ಪಕ್ಷದ ಬೆಳಗಾವಿ ವಿಭಾಗ ಮಟ್ಟದ ಸಂಕಲ್ಪ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ನಗರದ ಗೋಕುಲ ರಸ್ತೆಯಲ್ಲಿ ಈ ಒಂದು ಸಮಾವೇಶವನ್ನು ಆಯೋಜಿಸಲಾಗಿದೆ. ಸಮಾವೇಶವು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆಯಲಿದ್ದು ಈಗಾಗಲೇ ಪಕ್ಷದ ಎಲ್ಲಾ ನಾಯಕರು ಹುಬ್ಬಳ್ಳಿಗೆ ಆಮಮಿಸಿದ್ದಾರೆ.ಇನ್ನೂ ಸಮಾವೇಶಕ್ಕೆ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಒಂದು ಕಡೆ ಮರೆತಿದ್ದು ಇನ್ನೂ ಮಾಜಿ ಸಚಿವ ಹಿರಿಯ ಕಾಂಗ್ರೆಸ್ ಪಕ್ಷದ ನಾಯಕರಾಗಿರುವ ಎಸ್ ಆರ್ ಮೊರೆ ಅವರನ್ನು ಪಕ್ಷದ ನಾಯಕರು ಮರೆತಿದ್ದಾರೆ.

ಧಾರವಾಡದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಮಾಜಿ ಸಚಿವ ಎಸ್ ಆರ್ ಮೊರೆ ಅವರನ್ನು ಪಕ್ಷದ ಯಾವೊಬ್ಬ ನಾಯಕರು ನೆನಪು ಮಾಡಿಕೊಂಡಿಲ್ಲ. ಆಮಂತ್ರಣ ಮೊಡೊದನ್ನೇ ಮರೆತಿದ್ದಾರೆ.

ಸಮಾವೇಶಕ್ಕೆ ಆಮಂತ್ರಣ ಮಾಡತಾರೆ , ಯಾರಾದರೂ ಒಬ್ಬರು ಕರಿತಾರೆ ಎಂದುಕೊಂಡು ನಿನ್ನೆ ಮಧ್ಯಾಹ್ನ ದವರೆಗೆ ಕಾಯುತ್ತಿದ್ದ ಮೊರೆ ಅವರು ಅಸಮಾಧಾನಗೊಂಡು ಸಂಜೆ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು.ವಿನಯ ಕುಲಕರ್ಣಿ ಅವರನ್ನು ಒಂದು ಕಡೆ ಮರೆತರೆ ಇವರಿಗೆ ಆಮಂತ್ರಣ ಮಾಡೊದನ್ನೆ ಕಾಂಗ್ರೆಸ್ ಪಕ್ಷದ ನಾಯಕರು ಮರೆತಿದ್ದಾರೆ.ಇದರಿಂದ ಧಾರವಾಡದಲ್ಲಿ ವಿನಯ ಕುಲಕರ್ಣಿ ಮತ್ತು ಎಸ್ ಆರ್ ಮೊರೆ ಅವರ ಕಾರ್ಯಕರ್ತರು ಅಭಿಮಾನಿಗಳು ಪಕ್ಷದ ನಾಯಕರ ವಿರುದ್ಧ ತೀವ್ರವಾಗಿ ನಾಯಕರ ಮೇಲೆ ಅಸಮಾಧಾನಗೊಂಡಿದ್ದು ಕಾರ್ಯಕ್ರಮದಿಂದ ದೂರ ಉಳಿಯಲು ತೀರ್ಮಾನಿಸಿದ್ದಾರೆ. ಸೌಜನ್ಯಕ್ಕಾದರೂ ಕೈ ಪಕ್ಷದ ನಾಯಕರು ನೆನಪು ಮಾಡಿಕೊಳ್ಳಬಹುದಾಗಿತ್ತು‌

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.