This is the title of the web page
This is the title of the web page

Live Stream

[ytplayer id=’1198′]

May 2025
T F S S M T W
1234567
891011121314
15161718192021
22232425262728
293031  

| Latest Version 8.0.1 |

ಕೋಲಾರ

ಲೋಕಾಯುಕ್ತ ಬಲೆಗೆ ಬಿದ್ದ KAS ಅಧಿಕಾರಿ – ಒಂದೂವರೆ ಲಕ್ಷ ಪಡೆಯುವಾಗ ಟ್ರ್ಯಾಪ್ ಆದ ಅಧಿಕಾರಿ…..

ಲೋಕಾಯುಕ್ತ ಬಲೆಗೆ ಬಿದ್ದ KAS ಅಧಿಕಾರಿ – ಒಂದೂವರೆ ಲಕ್ಷ ಪಡೆಯುವಾಗ ಟ್ರ್ಯಾಪ್ ಆದ ಅಧಿಕಾರಿ…..
WhatsApp Group Join Now
Telegram Group Join Now

ಶಿಡ್ಲಘಟ್ಟ

ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸರ್ಕಾರಿ ಅಧಿಕಾರಿ ಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಶಿಡ್ಲಘಟ್ಟ ದಲ್ಲಿ ನಡೆದಿದೆ.ಭೂ ಪರಿವರ್ತಿತ ಜಮೀನಿನ ನಕ್ಷೆ ಮಂಜೂರಾತಿಗೆ ಅನುಮೋದನೆ ನೀಡಲು ₹ 1.5 ಲಕ್ಷ ಲಂಚ ಪಡೆಯುತ್ತಿದ್ದಾಗ ಶಿಡ್ಲಘಟ್ಟ ತಾಲ್ಲೂಕು ಪಂಚಾಯಿತಿ ಇಒ ಜಿ.ಮುನಿರಾಜ ಚಿಕ್ಕಬಳ್ಳಾಪುರ ಜಿಲ್ಲಾ ಲೋಕಾ ಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ

ದಾಳಿ ನಡೆಸಿ ಬಂಧಿಸಿದ್ದಾರೆ.ತಾಲ್ಲೂಕಿನ ಜಂಗಮ ಕೋಟೆ ಹೋಬಳಿ ಘಟ್ಟಮಾರನಹಳ್ಳಿಯ ನಂಜೇಗೌಡ ಅವರು ತಮ್ಮ 39 ಗುಂಟೆ ಪರಿ ವರ್ತಿತ ಜಮೀನಿನ ನಕ್ಷೆ ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ದು ಇಒ ಅವರು ₹ 2 ಲಕ್ಷ ಬೇಡಿಕೆಯಿಟ್ಟಿದ್ದ ರಂತೆ. ಈ ಪೈಕಿ ₹ 1.5 ಲಕ್ಷ ಅನ್ನು ಇಒ ಅವರ ಕಚೇರಿಯಲ್ಲೇ ಮುನಿರಾಜ ಅವರಿಗೆ ನೀಡುತ್ತಿ ದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

ಲೋಕಾಯುಕ್ತ ಎಸ್‌.ಐ ಮೋಹನ್ ನೇತೃತ್ವದ ಲೋಕಾಯುಕ್ತ ಪೊಲೀಸರ ತಂಡವು ದಾಳಿ ನಡೆಸಿದ್ದು ಲಂಚದ ಹಣ ₹ 1.5 ಲಕ್ಷ ಸಮೇತ ಇಒ ಅವರನ್ನು ವಶಕ್ಕೆ ಪಡೆದಿದ್ದಾರೆ.ನಂತರ ಇಒ ಅವರ ಕೋಲಾರದ ಮನೆಗೂ ತೆರಳಿರುವ ಲೋಕಾಯುಕ್ತ ಪೊಲೀಸರು ಮನೆಯಲ್ಲಿಯೂ ತೀವ್ರ ಶೋಧ ನಡೆಸಿದ್ದಾರೆ.

ನಂಜೇಗೌಡ ಅವರ ಭೂ ಪರಿವರ್ತಿತ ಜಮೀನಿನ ನಕ್ಷೆ ಅನುಮೋದನೆಗೆ ಸಂಬಂಧಿಸಿದ ಅರ್ಜಿ ಯಲ್ಲದೆ ಇತರೆ ದಾಖಲೆಗಳನ್ನು ತಡಕಾಡಿದ್ದಾರೆ. ನಂತರ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಮುನಿರಾಜ ಅವರ ಆರೋಗ್ಯ ತಪಾಸಣೆ ನಡೆಸಲಾಯಿತು.

ಲೋಕಾಯುಕ್ತ ಡಿವೈಎಸ್ಪಿ ವೀರೇಂದ್ರ ಕುಮಾರ್, ಶಿವಪ್ರಸಾದ್, ಎಸ್‌ಐ ಮೋಹನ್, ಸಿಬ್ಬಂದಿ ಸಂತೋಷ್, ಸತೀಶ್, ನಾಗರಾಜ್, ಲಿಂಗರಾಜ, ಗುರು, ಚೌಡರೆಡ್ಡಿ, ಪ್ರಕಾಶ್ ಹಾಜರಿದ್ದು ಹೆಚ್ಚಿನ ವಿವರ ಕಲೆಹಾಕುವ, ದಾಖಲೆಗಳನ್ನು ಸಂಗ್ರಹಿ ಸುವ ಕೆಲಸ ಮುಂದುವರೆಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಶಿಡ್ಲಘಟ್ಟ…..


Google News

 

 

WhatsApp Group Join Now
Telegram Group Join Now
Suddi Sante Desk