ಕೋಲಾರ –
ಅರಣ್ಯ ಇಲಾಖೆಯ ಡಿಸಿಎಫ್ ಅಧಿಕಾರಿ ಯೊಬ್ಬರ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ ಘಟನೆ ಕೋಲಾರ ದಲ್ಲಿ ನಡೆದಿದೆ ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಮಾಡಿ ರುವ ಆರೋಪದ ಮೇಲೆ ಈ ಒಂದು ದಾಳಿಯಾ ಗಿದ್ದು ಲೋಕಾಯುಕ್ತ ಅಧಿಕಾರಿಗಳು ಡಿಸಿಎಫ್ ವೆಂಕಟೇಶ್ ಕ್ವಾರ್ಟರ್ಸ್ ಕಚೇರಿ ಶೋಧವನ್ನು ಮಾಡುತ್ತಿದ್ದಾರೆ.
ಕೋಲಾರ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ(ಡಿಸಿಎಫ್) ಜಿ.ವೆಂಕ ಟೇಶ್ ಅವರು ವಾಸವಿರುವ ಕ್ವಾರ್ಟರ್ಸ್ ಮೇಲೆ ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಶೋಧ ನಡೆಸುತ್ತಿದ್ದಾರೆ.ಇನ್ನೂ ಈ ಸಂದ ರ್ಭದಲ್ಲಿ ಅಧಿಕಾರಿ ವೆಂಕಟೇಶ್ ಇರಲಿಲ್ಲ ಕ್ವಾರ್ಟ ರ್ಸ್ ನಲ್ಲಿ ಹಣ ಸಿಕ್ಕಿದೆಯಂತೆ.ಕ್ಲಾಕ್ ಟವರ್ ಬಳಿ ಇರುವ ಅರಣ್ಯ ಇಲಾಖೆ ಕ್ವಾರ್ಟರ್ಸ್ ಹಾಗೂ ಹಳೆ ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಕಚೇರಿ ಶೋಧಿಸಿ ಮಹಜರ್ ಮಾಡಲಾಗಿದ್ದು ಕೆಲ ದಾಖಲೆಗಳನ್ನು ಈಗಾಗಲೇ ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಕೋಲಾರ…..