51 ಜನರನ್ನು ಬಲಿ ತಗೆದುಕೊಂಡ ಬಸ್ ಚಾಲಕ ಇವನೇ ನೋಡಿ – ಆರೋಪಿಯನ್ನು ಬಂಧನ ಮಾಡಿದ ಪೊಲೀಸರು

Suddi Sante Desk

ಮಧ್ಯಪ್ರದೇಶ –

ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಸಂಭವಿಸಿದ ಬಸ್ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ ಸಧ್ಯ 51 ಕ್ಕೆ ಏರಿಕೆಯಾಗಿದೆ. 58 ಜನ ಪ್ರಯಾಣಿಸುತ್ತಿದ್ದ ಬಸ್ಸೊಂದು ಕಾಲುವೆಗೆ ಉರುಳಿ 51 ಜನ ಮೃತಪಟ್ಟಿದ್ದಾರೆ. ಸಧ್ಯ ಈ ಭೀಕರ ದುರಂತಕ್ಕೆ ಕಾರಣನಾಗಿ, ಪರಾರಿಯಾಗಿದ್ದ ಬಸ್‌ ಚಾಲಕನನ್ನ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಬಸ್ ಚಾಲಕನ ಬಂಧನವನ್ನು ಸಿಧಿ ಪೊಲೀಸರು ಖಚಿತಪಡಿಸಿದ್ದು, ಆರೋಪಿ ಚಾಲಕನನ್ನು ರಾಂಪುರ್ ನಾಯ್ಕಿನ್ ಪೊಲೀಸ್ ಠಾಣೆ ಮತ್ತು ಪಿರಾವ್ ಚೌಕಿ ಪೊಲೀಸರು ಬಂಧಿಸಿದ್ದಾರೆ.

ಮಂಗಳವಾರ ಬೆಳಿಗ್ಗೆ ಸಿಧಿಯಿಂದ ಸತ್ನಾಕ್ಕೆ 58 ಜನ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಬಸ್ ಬನ್ಸಾಗರ್ ಕಾಲುವೆ ಬಳಿ ದುರಂತಕ್ಕೀಡಾಗಿತ್ತು. ಅಪಘಾತದ ನಂತ್ರ ಬಸ್‌ನಲ್ಲಿದ್ದ 7 ಪ್ರಯಾಣಿಕರು ಈಜಿ ದಡ ಸೇರಿದ್ದು, 51 ಪ್ರಯಾಣಿಕರು ಮೃತ ಪಟ್ಟಿದ್ದಾರೆ.

ಇದ್ರಲ್ಲಿ ಈಗಾಗಲೇ 51 ಮೃತ ದೇಹಗಳ ಮೇಲೆತ್ತಿದ್ದು, ಶೋಧ ಕಾರ್ಯ ಮುಂದುವರೆದಿದೆ. ಇನ್ನೂ ಇವೆಲ್ಲದರ ನಡುವೆ ಈ ಒಂದು ದೊಡ್ಡ ಪ್ರಮಾಣದ ಅಪಘಾತದಲ್ಲಿ ಮೃತರಾದವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಈಗಾಗಲೇ ಪರಿಹಾರ ಘೋಷಣೆ ಮಾಡಲಾಗಿದೆ ‌.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.