ಸಾಹುಕಾರ್ ಸೆಕ್ಸ್ ಸಿಡಿ ಹಿಂದೆ ಬೆಳಗಾವಿ ಕನಕಪುರ ಕೈವಾಡವಂತೆ

Suddi Sante Desk

ಬೆಂಗಳೂರು –

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಬಿಡುಗಡೆ ಮತ್ತು ಅದರ ಹಿಂದೆ ಹಾಗೇ ಮೇಲಿನ ಆರೋಪದ ವಿಚಾರದಲ್ಲಿ ರಾಜಕೀಯ ಷಡ್ಯಂತ್ರ ವಿದ್ದು ಕನಕಪುರ ಮತ್ತು ಬೆಳಗಾವಿ ಕಡೆಯವರು ಮಾಡಿದ್ದಾರೆ ಎಂದು ಪರಿಸರ ಜೀವಶಾಸ್ತ್ರ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಪಿ. ಯೋಗೇಶ್ವರ್ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಷಡ್ಯಂತ್ರ ಮಾಡಿದವರು ಮುಂದಿನ ದಿನಗಳಲ್ಲಿ ಅನುಭವಿಸುತ್ತಾರೆ ಎಂದಷ್ಟೇ ಹೇಳಿದರು ಅನಾವಶ್ಯಕವಾಗಿ ತಮಗೆ ಸಂಬಂಧ ವಿಲ್ಲದ ವಿಚಾರಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದರು.

ಇನ್ನೂ ಬಿಜೆಪಿ ಸರ್ಕಾರ ರಚನೆ ಸಂದರ್ಭದಲ್ಲಿ 20 ಜನರಿದ್ದರು. ಕೆಲವು ಸಚಿವರು ನ್ಯಾಯಾಲಯದ ಮೊರೆ ಹೋಗಿರುವುದು ಅವರ ವೈಯಕ್ತಿಕ ವಿಚಾರ. ಸಾಮೂಹಿಕ ವಿಚಾರವಲ್ಲ ಎಂದು ಸ್ಪಷ್ಟಪಡಿಸಿದರು. ನ್ಯಾಯಾಲಯಕ್ಕೆ ಏಕೆ ಹೋಗಿದ್ದಾರೆ? ಎಂಬುದಕ್ಕೆ ತಮ್ಮ ಬಳಿ ಉತ್ತರವಿಲ್ಲ. ಯಾರು ನ್ಯಾಯಾಲಯದ ಮೊರೆ ಹೋಗಿದ್ದಾರೋ ಅವರನ್ನೇ ಕೇಳಬೇಕು ಎಂದು ಹೇಳಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.