ಹೃದಯಾಘಾತದಿಂದ ಕಂಡಕ್ಟರ್ ಸಾವು – ಕರ್ತವ್ಯದ ಮೇಲಿದ್ದಾಗ ಸಾವು

Suddi Sante Desk

ಬೆಂಗಳೂರು –

KSRTC ಬಸ್ ನಲ್ಲಿ ಕರ್ತವ್ಯದ ಮೇಲೆ ಬೆಂಗಳೂ ರಿಗೆ ಬಂದಿದ್ದ ನಿರ್ವಾಹಕರೊಬ್ಬರು ಹೃದಯಾಘಾ ತಕ್ಕೆ ಒಳಗಾಗಿ ಮೃತಪಟ್ಟಿರುವ ಘಟನೆ ಬೆಂಗಳೂರಿ ನಲ್ಲಿ ನಡೆದಿದೆ. ಬೆಂಗಳೂರಿನ ಕೆಂಪೇ ಗೌಡ ಬಸ್ ನಿಲ್ದಾಣದ ಟರ್ಮಿನಲ್ ವೊಂದ ರಲ್ಲಿ ಈ ಪ್ರಕರಣ ನಡೆದಿದೆ. ಬಾಗಲಕೋಟೆ ಜಿಲ್ಲೆಯ ವಿದ್ಯಾಗಿರಿಯ ರವೀಂದ್ರ ಪಡೆಯನ್ನವರ್ (49) ಮೃತಪಟ್ಟ ಕಂಡಕ್ಟರ್ ಆಗಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬೀಳಗಿ ಡಿಪೋಗೆ ಸೇರಿದ ಬಸ್ ನಲ್ಲಿ ರವೀಂದ್ರ ನಿರ್ವಾಹಕರಾಗಿದ್ದರು. KA 29, F 1462ರಲ್ಲಿ ಕರ್ತವ್ಯದಲ್ಲಿದ್ದ ಅವರು ಇಂದು ಬೆಳಗ್ಗೆ ಬೆಂಗಳೂರು ತಲುಪಿದ ಬಳಿಕ ಉಪಾಹಾರ ಕ್ಕಾಗಿ ತೆರಳಿದ್ದರು.ಪಾರ್ಕಿಂಗ್ ನಲ್ಲಿ ಬಸ್ ನಿಲ್ಲಿಸಿದ ಬಳಿಕ ತಿಂಡಿ ತಿನ್ನುತ್ತಿದ್ದ ಅವರಿಗೆ ಹೃದಯಾಘಾತ ವಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾ ಯಿತಾದರೂ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.