ಐರನ್ ಇನ್ಸ್ಪೆಕ್ಟರ್ ಗೆ ಶಾಸಕ ಅಮೃತ ದೇಸಾಯಿ ಅವರಿಂದ ಪ್ರೀತಿಯ ಸನ್ಮಾನ ಗೌರವ…..

Suddi Sante Desk

ಬೆಂಗಳೂರು –

ಇತ್ತೀಚಿಗೆ ಒರಿಸ್ಸಾದ ಕೊನಾರ್ಕ್ ನಲ್ಲಿ ನಡೆದ ಸ್ಪರ್ಧೆಯಲ್ಲಿ ಐರನ್‌ ಮ್ಯಾನ್ ಆಗಿ ಸಾಧನೆ ಮಾಡಿದ ಹುಬ್ಬಳ್ಳಿಯ ಹೆಸ್ಕಾಂ ಇನ್ಸ್ಪೆಕ್ಟರ್ ಮುರಗೇಶ ಚೆನ್ನಣ್ಣವರ ಅವರಿಗೆ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ಅಯ್ಯಪ್ಪ ದೇಸಾಯಿ ಸನ್ಮಾನಿಸಿ ಗೌರವಿಸಿದರು‌‌.

ಬೆಂಗಳೂರಿನ ಶಾಸಕರ ಭವನದಲ್ಲಿ ಐರನ್‌ ಇನ್ಸ್ಪೆಕ್ಟರ್ ಮುರಗೇಶ ಚೆನ್ನಣ್ಣವರ ಅವರನ್ನು ಶಾಸಕ ಅಮೃತ ದೇಸಾಯಿ ವಯಕ್ತಿಕವಾಗಿ ಕ್ಷೇತ್ರದ ಜನತೆಯ ಪರವಾಗಿ ಪ್ರೀತಿಯಿಂದ ಸನ್ಮಾನಿಸಿ ಗೌರವಿಸಿದರು ಅಭಿನಂದನೆ ಸಲ್ಲಿಸಿದರು. ಇದೇ ವೇಳೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಸಾಧನೆ ಮಾಡಲೆಂದು ಶಾಸಕ ಅಮೃತ ದೇಸಾಯಿ ಶುಭ ಹಾರೈಸಿದರು.ಇನ್ನೂ ಹದಿನೈದು ಘಂಟೆಗಳಲ್ಲಿ ದೊಡ್ಡ ಸಾಧನೆ ಮಾಡಿ ಐರನ್‌ ಮ್ಯಾನ್ ಆಗಿ ಹೊರಹೊಮ್ಮಿದ ಮುರಗೇಶ ಚೆನ್ನಣ್ಣವರ ಅವರಿಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪ್ರಶಸ್ತಿಗಳು ಲಭಿಸಲಿ ಎಂದು ಶುಭ ಹಾರೈಸಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.