ಕೋವಿಡ್ ಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಬಲಿ – 31 ವಯಸ್ಸಿನಲ್ಲಿ ಅಧ್ಯಕ್ಷರಾಗಿದ್ದ ಹನುಮಂತ……

Suddi Sante Desk

ಬೀದರ –

ಮಹಾಮಾರಿ ಕೋವಿಡ್ ಗೆ ಗ್ರಾಮ ಪಂಚಾಯತಿ ಅದ್ಯಕ್ಷರೊಬ್ಬರು ಸಾವಿಗೀಡಾದ ಘಟನೆ ಬೀದರ ನ ಬಸವಕಲ್ಯಾಣ ತಾಲೂಕಿನಲ್ಲಿ ಮಂಠಳ ಗ್ರಾಮದಲ್ಲಿ ನಡೆದಿದೆ‌.ಹೌದು ಬಸವಕಲ್ಯಾಣ ನಗರ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ಅಟ್ಟಹಾಸ ಮೆರೆ ಯುತ್ತಿರುವ ಮಹಾಮಾರಿ ಕೊರೊನಾ ಸೋಂಕು ಇದೀಗ ಗ್ರಾಮ ಪಂಚಾಯತ್ ಅಧ್ಯಕ್ಷ ರನ್ನು ಬಲಿ ಪಡೆದಿದೆ

ಮಂಠಾಳ ಗ್ರಾ.ಪಂ ಅಧ್ಯಕ್ಷ ಹಣಮಂತ ದತ್ತು ಪದ್ಮೆ (31) ಕೊರೊನಾಗೆ ಬಲಿಯಾದ ಯುವ ಅಧ್ಯಕ್ಷ ರಾಗಿದ್ದಾರೆ.ಕೆಲ ದಿನಗಳಿಂದ ಕೊರೊನಾ ಸೋಂಕು ದೃಢವಾಗಿದ್ದ ಹಿನ್ನೆಲೆ ಕಲಬುರಗಿಯ ಬಸವೇಶ್ವರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತಿದ್ದರು. ಆದ ರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆ ದಿದ್ದಾ ರೆ.ಕರ್ನಾಟಕ ಗೃಹ ನಿರ್ಮಾಣ ಮಹಾ ಮಂಡಳಿಯ ನಿವೃತ್ತ ಅಧಿಕಾರಿ ಅವರ ಪುತ್ರರಾಗಿದ್ದು ಮಂಠಳ ಗ್ರಾ.ಪಂ ಚುನಾವಣೆಯಲ್ಲಿ ಗ್ರಾಮದ ವಾರ್ಡ್ ಸಂಖ್ಯೆ -8 ರಿಂದ ಅವಿರೋಧವಾಗಿ ಆಯ್ಕೆಯಾಗಿ ನೂತನ ಅಧ್ಯಕ್ಷರಾಗಿ ನೇಮಕವಾಗಿದ್ದರು.ಕಳೆದ ತಿಂಗಳು ನಡೆದ ಬಸವಕಲ್ಯಾಣ ಕ್ಷೇತ್ರದ ವಿಧಾನಸಭೆ ಉಪಚುನಾವಣೆ ವೇಳೆಯಲ್ಲಿ ತಂದೆ ಮತ್ತು ಮಗ ಇಬ್ಬರು ಕೂಡ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗಿದ್ದರು.ಚುನಾವಣೆ ಮುಗಿದ ನಂತರ ಕೊರೊನಾ ಸೋಂಕು ಧೃಡಪಟ್ಟ ಕಾರಣ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತಿದ್ದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.