ಅವರಪ್ಪನಿಗೆ ಹುಟ್ಟಿದ್ದರೆ ಅವನು ನನ್ನ ಸಿಡಿ ರಿಲೀಸ್ ಮಾಡಲಿ – ಇಂತಹ ನೂರು ಆರೋಪ ಎದುರಿಸುವ ತಾಕತ್ತು ನನಗಿದೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್…..

Suddi Sante Desk

ವಿಜಯಪುರ –

ಶಾಸಕ ಯತ್ನಾಳ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಪೊಟೋ ವೈರಲ್ ವಿಚಾರ ಕುರಿತಂತೆ ಇದರಲ್ಲಿ ಯಾರು ಯಾರು ಅದಾರ ಎಲ್ಲವೂ ಗೊತ್ತಿದೆ.ದಾಖಲೆ ಸಮೇತ ನಮಗೆ ಮಾಹಿತಿ ಇದೆ.ಅವರಿಗೆಲ್ಲ ಸರಿಯಾಗಿ ತಕ್ಕ ಶಾಸ್ತ್ರೀ ಆಗುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ವಿಜಯಪುರದಲ್ಲಿ ಮಾತನಾಡಿದ ಅವರು ಭ್ರಷ್ಟಾಚಾರದ ವಿರುದ್ದ, ಹಿಂದುತ್ವದ ಪರವಾಗಿ ನಾನು ಮಾತನಾಡುತ್ತೇನೆ ಅದು ಅವರಿಗೆ ಸಮಸ್ಯೆಯಾಗುತ್ತಿದೆ ಈ ಪೋಟೋ ವೈರಲ್ ಪ್ರಕರಣದಲ್ಲಿ ಎಲ್ಲ ಪಕ್ಷದವರಿದ್ದಾರೆ ಎಂದರು.ಸಿಡಿ ಮಾಡುವಂತದ್ದು ಬಿಜೆಪಿಯ ಒಬ್ಬರದ್ದು ಹಾಗೂ ಕಾಂಗ್ರೆಸ್ ನವರದ್ದು ಒಬ್ಬರದು ಪ್ಯಾಕ್ಟರಿ ಇದೆ‌ ಎಂದು ನಾನು ಹಿಂದೆಯೇ ಹೇಳಿದ್ದೇನೆ ಎಂದರು

ನನಗೆ ಅವಕಾಶ ತಪ್ಪಿಸಲು ಯಾರಿಂದಲೂ ಸಾದ್ಯವಿಲ್ಲ. ನನ್ನ ಸಿಡಿ ಇದ್ದರೆ ಬಿಡುಗಡೆ ಅಗಬೇಕಲ್ಲ.ಯಾರಾದರೂ ವಿಡಿಯೋ ಕಾಲ್ ಮಾಡಿದಾಗ ಕೆಲವೋಮ್ಮೆ ನಾನು ರಿಸೀವ್ ಮಾಡುತ್ತೇ‌ನೆ.ಕಾರ್ಯಕರ್ತರು ಕೆಲವೊಮ್ಮೆ ಒತ್ತಾಯ ಮಾಡಿದಾಗ ನಾನು ವಿಡಿಯೋ ಕಾಲ್ ರಿಸೀವ್ ಮಾಡುತ್ತೇನೆ.ಇವರ ತಂದೆಗೆ ಇವರು ಹುಟ್ಟಿದ್ದರೆ ನನ್ನ ಸಿಡಿ ಬಿಡುಗಡೆ ಮಾಡಲಿ ಎಂದರು

ಇನ್ನೂ ಪೋಲಿಸ್ ಇಲಾಖೆಯವರು ಸಮರ್ಥರಿದ್ದಾರೆ ಈ ಕುರಿತು ತನಿಖೆ ಮಾಡುತ್ತಾರೆಂದರು.ಯಾರು ಬೆಳೆಯುತ್ತಿ ದ್ದಾರೆ,ಯಾರು ನೇರವಾಗಿ ಮಾತನಾಡುತ್ತಾರೆ, ಅಂತರ ವನ್ನು ತುಳಿಯುವ ಪ್ರಯತ್ನ ಇದಾಗಿದೆ.

ಇಂತಹ ನೂರು ಆರೋಪ ಬಂದರೂ ಎದುರಿಸುವ ತಾಕತ್ತು ನನಗಿದೆ ಕಳ್ಳರ ಇನ್ನೊಂದು ಸ್ವಲ್ಪ ದಿನದಲ್ಲಿ ಸಿಗುತ್ತಾರೆ ಜನರ ಮುಂದೆ ಬೆತ್ತಲಾಗುತ್ತಾರೆ ಎಂದು ಶಾಸಕ ಯತ್ನಾಳ ಹೇಳಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.