ಬೆಂಗಳೂರು –
ವಸತಿ ಸಮುಚ್ಛಯದ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಮಂಜೂರು ಮಾಡಲು 2 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದ ಬೆಸ್ಕಾಂ ಅಧೀಕ್ಷಕ ಇಂಜಿನಿಯರ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾನೆ.ಬೆಂಗಳೂರು ಗ್ರಾಮಾಂತರ ವೃತ್ತದಲ್ಲಿರುವ ಬೆಸ್ಕಾಂ ಕಚೇರಿಯ ಅಧೀಕ್ಷಕ ಇಂಜಿನಿಯರ್(ವಿದ್ಯುತ್)ಎಚ್.ವಿ.ಕೃಷ್ಣಪ್ರಸಾದ್ ಬಂಧಿತರಾದವರಾಗಿದ್ದಾರೆ
ಧೀರಾನ್ ಇಸ್ಪಾಸ್ಟ್ರಕ್ಟರ್ ಪ್ರೈ.ಲಿ ಕಂಪನಿಯವರು ನಿರ್ಮಿಸಿದ್ದ ಧೀರಾನ್ ವಸತಿ ಸಮುಚ್ಛಯದ ಕಟ್ಟಡಕ್ಕೆ 419 ಕಿಲೋ ವ್ಯಾಟ್ ವಿದ್ಯುತ್ ಸಂಪರ್ಕದ ಮಂಜೂರಾತಿ ಪಡೆಯಲು ವಿದ್ಯುತ್ ಗುತ್ತಿಗೆದಾರ ಶರಣಪ್ಪ ಅವರು ಎಚ್.ವಿ. ಕೃಷ್ಣಪ್ರ ಸಾದ್ನನ್ನು ಭೇಟಿಯಾಗಿದ್ದರು.ಆ ವೇಳೆ ವಿದ್ಯುತ್ ಸಂಪರ್ಕದ ಮಂಜೂರಾತಿಗಾಗಿ ಎಚ್.ವಿ. ಕೃಷ್ಣಪ್ರಸಾದ್ 2 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದಂತೆ.
ಶರಣಪ್ಪ ಈ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶರಣಪ್ಪ ಅವರಿಂದ ಆರೋಪಿ ಕೃಷ್ಣ ಪ್ರಸಾದ್ 1.50 ಲಕ್ಷ ರೂ. ಲಂಚ ಸ್ವೀಕರಿಸುತ್ತಿ ದ್ದಾಗ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ
ಸುದ್ದಿ ಸಂತೆ ನ್ಯೂಸ್ ಬ