ಧಾರವಾಡ –
ಸಧ್ಯ ರಾಜ್ಯದಲ್ಲಿ ಎಲ್ಲಿ ನೋಡಿದಲ್ಲಿ ರಾಜ್ಯದ ಸರ್ಕಾರಿ ನೌಕರರು ಪಿಂಚಣಿಗಾಗಿ ಬೀದಿಗಿಳಿದು ಹೋರಾಟವನ್ನು ಮಾಡುತ್ತಿ ದ್ದಾರೆ.ಇನ್ನೂ ರಾಜ್ಯದ ತುಂಬೆಲ್ಲಾ ಈ ಒಂದು ಕಿಚ್ಚು ಜೋರಾಗು ತ್ತಿದ್ದು ಸರ್ಕಾರಿ ನೌಕರರು ಹಳೆ ಪಿಂಚಣಿ ಜಾರಿ ಗಾಗಿ ಸಿಡಿದೆದ್ದಿದ್ದು ಡಿಸೆಂಬರ್ 19 ರಂದು ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಶಕ್ತಿ ಪ್ರದರ್ಶನ ನಡೆಯಲಿದ್ದು ಇದಕ್ಕೂ ಮುನ್ನ ರಾಜ್ಯದ ತುಂಬೆಲ್ಲಾ ಸರ್ಕಾರಿ ನೌಕರರು ಈ ಒಂದು ಯಾತ್ರೆಗಾಗಿ ತಾಕತ್ತನ್ನು ಪ್ರದರ್ಶನ ಮಾಡಿದರು.
ನಗರದಲ್ಲಿ ಸಾವಿರಾರು ಸರ್ಕಾರಿ ನೌಕರರು ಬೀದಿಗಿಳಿದು ಹೋರಾಟ ಮಾಡಿದ್ದು ಒಂದು ವಿಚಾರವಾದರೆ ಈ ಒಂದು ಹೋರಾಟದಲ್ಲಿ ಮಹಿಳಾ ಶಿಕ್ಷಕಿಯೊಬ್ಬರು ಪುಟ್ಟ ಮಗುವನ್ನು ಹೊಟ್ಟೆಗೆ ಕಟ್ಟಿಕೊಂಡು ನೌಕರರ ಈ ಒಂದು ಧ್ವನಿಗೆ ಶಕ್ತಿ ತುಂಬಿ ಹೋರಾಟ ಮಾಡಿದ್ದು ಪ್ರತಿಭಟನೆಯಲ್ಲಿ ವಿಶೇಷವಾಗಿ ಕಂಡು ಬಂದಿತು.
ಹೌದು ಇದಕ್ಕೆ ಸಾಕ್ಷಿ ಹೀಗೆ ಕೈಯಲ್ಲೊಂದು ಬೇಕೆ ಬೇಕು ನ್ಯಾಯ ಬೇಕು ಎನ್ನುವ ಘೋಷಣೆಯ ಭಿತ್ತಿ ಚಿತ್ರವನ್ನು ಹಿಡಿದುಕೊಂಡು ಹೊಟ್ಟೆಗೆ ಮಗು ವನ್ನು ಕಟ್ಟಿಕೊಂಡು ಹೆಗಲಿಗೊಂದು ಬ್ಯಾಗ್ ಹಾಕಿಕೊಂಡು ನಿಂತಿರುವ ಶಿಕ್ಷಕಿಯೇ ಸಾಕ್ಷಿ ಹೆಸರು ಶ್ರೀಮತಿ ಮಂಜುಳಾ ಹಾರಿಕೊಪ್ಪ ಧಾರವಾಡದ ಶಿಕ್ಷಕಿಯರ ತರಭೇತಿ ಕೇಂದ್ರದಲ್ಲಿ ದೈಹಿಕ ಶಿಕ್ಷಕಿಯಾಗಿ ಕರ್ತವ್ಯ ವನ್ನು ನಿರ್ವಹಿಸು ತ್ತಿರುವ ಇವರು ಮಗು ಚಿಕ್ಕದಾಗಿದೆ ಎಂದು ಕೊಂಡು ಮನೆಯಲ್ಲಿ ಹಾರೈಕೆ ಮಾಡುತ್ತಾ ಇದೇ ಒಂದು ನೆಪವನ್ನು ಹೇಳದೆ ಪಿಂಚಣಿಗಾಗಿ ಕರೆ ನೀಡಿದ ಸಹೋದ್ಯೋಗಿಗಳ ಈ ಒಂದು ಹೋರಾಟದಲ್ಲಿ ಪಾಲ್ಗೊಂಡು ಎಲ್ಲರಿಗೂ ರಾಜ್ಯಕ್ಕೆ ಸದ್ಯ ಹೋರಾಟ ಮಾಡುತ್ತಿರುವ ಸರ್ಕಾರಿ ನೌಕರರಿಗೆ ಮಾದರಿಯಾಗಿದ್ದು ಕಂಡು ಬಂದಿತು.
ಧಾರವಾಡದಲ್ಲಿನ ಹೋರಾಟದಲ್ಲಿನ ಈ ಒಂದು ಫೊಟೊ ಸಾಕಷ್ಟು ವೈರಲ್ ಆಗಿದ್ದು ಎಲ್ಲರ ಮನಕಲಕಿದ್ದು ಹೋರಾಟಗಾರರಿಗೆ ಶಿಕ್ಷಕಿ ಶ್ರೀಮತಿ ಮಂಜುಳಾ ಹಾರಿಕೊಪ್ಪ ಅವರು ಮಾದರಿಯಾಗಿದ್ದು ಇನ್ನೂ ಈ ಒಂದು ದೃಶ್ಯವ ನ್ನಾದರೂ ನೋಡಿಕೊಂಡು ಕೈಕಟ್ಟಿಕೊಂಡು ಕುಳಿತ ಕೆಲವೊಂದಿಷ್ಟು ಸರ್ಕಾರಿ ನೌಕರರು ಹೋರಾಟಕ್ಕೆ ಧ್ವನಿ ಗೂಡಿಸಿ ಶಕ್ತಿ ತುಂಬಬೇಕಿದೆ ಇತ್ತ ಸರ್ಕಾರ ಮುಖ್ಯಮಂತ್ರಿ ಅವರು ಸ್ಪಂದಿಸ ಬೇಕಿದೆ.
ವರದಿ – ಚಕ್ರವರ್ತಿ ಜೊತೆ ಮಂಜುನಾಥ ಬಡಿಗೇರ ಸುದ್ದಿ ಸಂತೆ ನ್ಯೂಸ್ ಡೆಸ್ಕ್