ಹುಬ್ಬಳ್ಳಿ –
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿನ ಗಣೇಶೋತ್ಸವ ಯಶಸ್ಸಿನ ಬಳಿಕ ಹಿಂದೂ ಪರ ಸಂಘಟನೆಯವರು ಈಗ ಮತ್ತೊಂದು ಬೇಡಿಕೆ ಇಟ್ಟಿದ್ದಾರೆ ಹೌದು ಗಲಾಟೆ ಯ ನಡುವೆ ಈ ಬಾರಿಯ ಗಣೇಶ ಹಬ್ಬದೊಂದಿಗೆ ಸಾಕಷ್ಟು ಪ್ರಮಾಣದಲ್ಲಿ ಯಶಸ್ವಿ ಕಂಡಿರುವ ಇವರು ಈಗ ಇಲ್ಲಿಯೇ ಹೋಳಿ ಹಬ್ಬ ಆಚರಣೆಗೆ ಬೇಡಿಕೆ ಇಟ್ಟಿದ್ದು ಹೀಗಾಗಿ ಇಲ್ಲಿನ ಗಲಾಟೆ ಕೊನೆಯಾಗುವ ಸಾಧ್ಯತೆ ಕಾಣುತ್ತಿಲ್ಲ.ಈಗ ಅದೇ ಸ್ಥಳದಲ್ಲಿ ಹೋಳಿ ಹಬ್ಬಕ್ಕೆ ಹೋಳಿ ಕಾಮಣ್ಣನ ಪ್ರತಿಷ್ಠಾಪ ನೆಗೆ ಹಿಂದೂ ಸಂಘಟನೆಗಳು ಅನುಮತಿ ನೀಡಬೇಕೆಂದು ಒತ್ತಾಯಿಸಿವೆ.
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಹಬ್ಬ ಆಚರಣೆಗೆ ಕರ್ನಾಟಕ ಹೈಕೋರ್ಟ್ ಕೊನೆ ಕ್ಷಣದಲ್ಲಿ ಅನುಮತಿ ನೀಡಿದ್ದು ನಂತರ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಗಣೇಶ ಮಂಡಳಿಗೆ ಪ್ರತಿಮೆ ಯನ್ನು ಸ್ಥಾಪಿಸಲು ಅನೇಕ ಷರತ್ತುಗಳೊಂದಿಗೆ ಅನುಮತಿ ನೀಡಿ ಈಗ ಎಲ್ಲವೂ ಮುಗಿದಿದ್ದು ಈ ಒಂದು ಯಶಸ್ಸಿನ ಬಳಿಕ ಈಗ ಇದೇ ಮೈದಾನದಲ್ಲಿ ಮತ್ತೊಂದು ಹಬ್ಬವನ್ನು ಆಚರಣೆ ಮಾಡಲು ಬೇಡಿಕೆ ಇಟ್ಟಿದ್ದಾರೆ
ಇನ್ನೂ ಇದರ ನಡುವೆ ಕಳೆದ ವಾರ,ಕ್ರಿಶ್ಚಿಯನ್ ಸಮು ದಾಯದ ಸದಸ್ಯರು ಈದ್ಗಾ ಮೈದಾನದಲ್ಲಿ ಸಮುದಾಯದ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಅನು ಮತಿ ಕೋರಿದ್ದರು.ಮುಂದಿನ ಸಭೆಯಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿತ್ತು.
ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ಹುಬ್ಬಳ್ಳಿಯ ಬಲಪಂಥೀಯ ಸಂಘಟನೆಗಳು ಈದ್ಗಾ ಮೈದಾನದ ಹೆಸರನ್ನು ರಾಣಿ ಚೆನ್ನಮ್ಮ ಮೈದಾನ ಎಂದು ಬದಲಾಯಿ ಸುವಂತೆ ಒತ್ತಾಯಿಸುತ್ತಿವೆ. ಈ ಪ್ರತಿಮೆಯು ಹುಬ್ಬಳ್ಳಿ ನಗರದ ಕೇಂದ್ರ ಬಿಂದುವಿನಲ್ಲಿದೆ.ಅಧಿಕಾರಿಗಳು ಮೈದಾ ನಕ್ಕೆ ಕಿತ್ತೂರಿನ ರಾಣಿ ಚೆನ್ನಮ್ಮ ಹೆಸರಿಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಇನ್ನೂ ಸಧ್ಯ ಗಣೇಶೋತ್ಸವದ ಯಶಸ್ಸಿನ ಬಳಿಕ ಈಗ ಮತ್ತೊಂದು ಬೇಡಿಕೆ ಇಟ್ಟಿದ್ದು ಪಾಲಿಕೆ ಗೆ ಹೊಸದೊಂದು ತಲೆನೋವು ಆರಂಭ ಗೊಂಡಿದ್ದು ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.