ಬಾಗಲಕೋಟೆ –
ಎನ್ ಪಿಎಸ್ ವಿಚಾರ ಕುರಿತಂತೆ ದಿನದಿಂದ ದಿನಕ್ಕೆ ರಾಜ್ಯದಲ್ಲಿ ಹೋರಾಟದ ಕಾವು ಜೋರಾ ಗುತ್ತಿದ್ದು ಇನ್ನೂ ಇತ್ತ ಡಿಸೆಂಬರ್ 19 ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದ್ದು ಹೀಗಾಗಿ ಈ ಒಂದು ಸಮಯದಲ್ಲಿ ಧ್ವನಿ ಎತ್ತುವಂತೆ ಒತ್ತಾಯಿಸಿ ಈಗಾಗಲೇ ರಾಜ್ಯದ ಹಲವೆಡೆ ಎನ್ ಪಿಎಸ್ ನೌಕರಿಂದ ಮನವಿ ಸಲ್ಲಿಕೆ ಕಾರ್ಯಕ್ರಮ ನಡೆಯಲಿದ್ದು
ಹೀಗಾಗಿ ನಾಳೆ ಬಾಗಲಕೋಟೆ ಮತಕ್ಷೇತ್ರದ ಶಾಸಕರಾದ ವೀರಣ್ಣ ಚರಂತಿಮಠ ರವರಿಗೆ ಮನವಿ ಸಲ್ಲಿಸಲು 05/12/2022 ಸೋಮವಾರ ದಂದು ಸಾಯಂಕಾಲ 04:00 ಘಂಟೆಗೆ ಬಸವೇ ಶ್ವರ ಕಾಲೇಜಿನ(ಹಳೆ ಬಾಗಲಕೋಟೆ) ಪ್ರವೇಶ ದ್ವಾರದಲ್ಲಿರುವ ಬೀಳೂರ ಅಜ್ಜನವರ ಗುಡಿಯ ಹತ್ತಿರ ಆಗಮಿಸುವಂತೆ ಎಲ್ಲಾ NPS ನೌಕರ ಬಂಧುಗಳು ಹಾಜರಿರಲು ವಿನಂತಿಯನ್ನು ಮಾಡ ಲಾಗಿದೆ.
ಇದರೊಂದಿಗೆ ಪ್ರೌಢಶಾಲಾ ಎನ್ ಪಿಎಸ್ ಬಂಧುಗಳು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಈ ಮೂಲಕ ಬಾಗಲಕೋಟೆ ತಾಲ್ಲೂಕಾ ಪ್ರೌಢಶಾಲಾ NPS ನೌಕರ ಬಳಗ ಕರೆ ನೀಡಿದೆ.
ಸುದ್ದಿ ಸಂತೆ ನ್ಯೂಸ್