ಧಾರವಾಡ –
ಚಾಲಕನ ನಿಯಂತ್ರಣ ತಪ್ಪಿ ಆಟೊ ವೊಂದು ಪಲ್ಟಿಯಾದ ಘಟನೆ ಧಾರವಾಡದ ಸಂಜೀವಿನಿ ಪಾರ್ಕ್ ಬಳಿ ನಡೆದಿದೆ. ಹುಬ್ಬಳ್ಳಿಯಿಂದ ಧಾರವಾಡ ಕಡೆಗೆ ಆಟೋ ಬರುತ್ತಿದ್ದು ಸಂಜೀವಿನಿ ಪಾರ್ಕ್ ಬಳಿ ಚಾಲಕನ ನಿಯಂತ್ರಣ ತಪ್ಪಿದೆ ಚಾಲಕ ತೀವ್ರವಾಗಿ ಗಾಯಗೊಂಡಿದ್ದು ಕೂಡಲೇ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಯಿತು.
ಇನ್ನೂ ರಫೀಕ್ ಎಂಬುವರೇ ಆಟೋ ಚಾಲಕ ರಾಗಿದ್ದು ನಗರದ ರಾಜೀವ್ ಗಾಂಧಿ ನಗರದ ನಿವಾಸಿಯಾಗಿದ್ದು ಇನ್ನೂ ಹುಬ್ಬಳ್ಳಿಗೆ ಹೋಗಿ ಮರಳಿ ಧಾರವಾಡಗೆ ಬರುವಾಗ ಈ ಒಂದು ಅವಘಡ ನಡೆದಿದೆ.
ಇನ್ನೂ ಸುದ್ದಿ ತಿಳಿದ ಧಾರವಾಡ ಸಂಚಾರಿ ಪೊಲೀಸ್ ಠಾಣೆಯ ಇನಸ್ಪೇಕ್ಟರ್ ಮಲಗೌಡ ನಾಯ್ಕರ್ ಮತ್ತು ಸಿಬ್ಬಂದಿಗಳು ಸ್ಥಳಕ್ಕೇ ಆಗಮಿಸಿ ಪರಿಶೀಲನೆ ಮಾಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ. ಇನ್ನೂ ಆಟೋ ಚಾಲಕರ ಸ್ಥೀತಿ ಗಂಭೀರವಾಗಿದ್ದು ಸಧ್ಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾನೆ.