ಧಾರವಾಡ –
ನಾಳೆ ಬೆಂಗಳೂರಿನಲ್ಲಿ ಎನ್ ಪಿಎಸ್ ನೌಕರರ ಶಕ್ತಿ ಪ್ರದರ್ಶನ ನಡೆಯಲಿದೆ.ಹೊಸ ಪಿಂಚಣಿ ಯೋಜನೆಯನ್ನು ವಿರೋಧಿಸಿ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ತರುವ ವಿಚಾರ ಕುರಿತಂತೆ ಈಗಾಗಲೇ ರಾಜ್ಯದಲ್ಲಿ ಬೃಹತ್ ಪ್ರಮಾಣದಲ್ಲಿ ಶಕ್ತಿ ಪ್ರದರ್ಶನವನ್ನು ಮಾಡಿರುವ ಶಿಕ್ಷಕರು ಸಧ್ಯ ನಾಳೆಯಿಂದ ಬೆಂಗಳೂರಿನಲ್ಲಿ ಮಾಡು ಇಲ್ಲವೇ ಮಡಿ ಹೋರಾಟವನ್ನು ಮಾಡಲಿದ್ದಾರೆ.
ಇದಕ್ಕಾಗಿ ಈಗಾಗಲೇ ರಾಜ್ಯದ ಮೂಲೆ ಮೂಲೆ ಗಳಿಂದ ಎನ್ ಪಿಎಸ್ ನೌಕರರು ರಾಜ್ಯದ ರಾಜಧಾನಿಯತ್ತ ಮುಖ ಮಾಡಿದ್ದು ಬೃಹತ್ ಪ್ರಮಾಣದಲ್ಲಿ ಬರುತ್ತಿದ್ದಾರೆ.ಈ ನಡುವೆ ನಾಳೆ ಯಿಂದ ನಡೆಯಲಿರುವ ಈ ಒಂದು ಹೋರಾಟಕ್ಕೆ ಇಲ್ಲೊಬ್ಬ ಶಿಕ್ಷಕರು ತಾವು ಹಳೆಯ ಪಿಂಚಣಿ ವ್ಯಾಪ್ತಿಯಲ್ಲಿ ಬರುತ್ತಿದ್ದರು ಕೂಡಾ ಹೋರಾಟ ಮಾಡುವ ನೌಕರರಿಗಾಗಿ 5001 ರೂಪಾಯಿ ದೇಣಿಗೆಯನ್ನು ನೀಡಿದ್ದಾರೆ.
ಹೌದು ಧಾರವಾಡದ ಶಿಕ್ಷಕ ಅಯ್ಯಪ್ಪ ಮೋಕಾಶಿ ಅವರೇ ನೆರವನ್ನು ನೀಡಿ ಇತರರಿಗೆ ಮಾದರಿ ಯಾಗಿದ್ದಾರೆ.ಧಾರವಾಡದಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷ ಎಮ್ ಆರ್ ಕಬ್ಬೇರ ಅವರಿಗೆ ಈ ಒಂದು ದೇಣಿಗೆಯ ಹಣವನ್ನು ನೀಡಿ ಉದಾರತೆಯನ್ನು ಮೆರೆದಿದ್ದಾರೆ.ಎನ್ ಪಿಎಸ್ ಘಟಕದ ಮುಖಂಡರಿಗೆ ಹಣವನ್ನು ನೀಡಿ ಇತರರಿಗೆ ಶಿಕ್ಷಕ ಅಯ್ಯಪ್ಪ ಮೋಕಾಶಿ ಮಾದರಿ ಯಾಗಿದ್ದಾರೆ.ಇನ್ನೂ ಈ ಒಂದು ಸಮಯದಲ್ಲಿ ತಾಲ್ಲೂಕು ಎನ್ ಪಿ ಎಸ್ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಮ್ ಆರ್ ಕಬ್ಬೇರ ಅವರೊಂದಿಗೆ ತಾಲ್ಲೂಕು ಕಾರ್ಯದರ್ಶಿ ಸೈಯದ್ ಕುಪ್ಪೇನೂರು,ತಾಲ್ಲೂಕು ಕೋಶಾ ಧ್ಯಕ್ಷರು ಸಿದ್ದು ವಾರದ,ಜಿಲ್ಲಾ ಕಾರ್ಯದರ್ಶಿ ಫೀರೋಜ್ ಗುಡೇನಕಟ್ಟಿ,ಸೇರಿದಂತೆ ಹಲವು ನೌಕರರು ಉಪಸ್ಥಿತರಿದ್ದರು.
2006 ರ ನಂತರ ನೇಮಕವಾದ ನೌಕರರಿಗೆ ಕರಾಳ ಶಾಸನ ವಾಗಿರುವ ಎನ್ಪಿಎಸ್ ರದ್ದುಗೊಳಿಸುವ ನಾಳೆಯ ಬೆಂಗಳೂರಿನ ಡಿಸೆಂಬರ್ 19ರ ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಬೆಂಬಲಾರ್ಥವಾಗಿ 5001 ರೂ ಗಳನ್ನು ದೇಣಿಗೆ ನೀಡಿ ಹೋರಾಟಕ್ಕೆ ನೆರವಿ ನೊಂದಿಗೆ ಬೆಂಬಲವನ್ನು ಅಯ್ಯಪ್ಪ ಮೋಕಾಶಿ ಯವರು ನೀಡಿದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ.