ಕಚೇರಿಯಲ್ಲಿ ರೇಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ BEO ಮತ್ತು ಮ್ಯಾನೇಜರ್ ಕೈ ತುಂಬಾ ಸಂಬಳ ಇದ್ದರೂ ಲಂಚಕ್ಕೆ ಕೈ…..

Suddi Sante Desk

ಮೈಸೂರು

ಸಾಮಾನ್ಯವಾಗಿ ಸಧ್ಯದ ಪರಿಸ್ಥಿತಿಯಲ್ಲಿ ತುಂಬಾ ಅಚ್ಚು ಕಟ್ಟಾಗಿ ಅದರಲ್ಲೂ ವ್ಯವಸ್ಥಿತವಾಗಿ ಭ್ರಷ್ಟಾಚಾರ ರಹಿತ ಇಲಾಖೆ ಇದ್ದರೆ ಅದು ಶಿಕ್ಷಣ ಇಲಾಖೆ ಸರಿ ಆದರೆ ಇಲಾಖೆ ಯಲ್ಲಿ ಇತ್ತೀಚಿಗೆ ಸಾಕಷ್ಟು ಪ್ರಮಾಣದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಎನ್ನೊದಕ್ಕೆ ಮೇಲಿಂದ ಮೇಲೆ ಕಂಡು ಬರುತ್ತಿರುವ ಪ್ರಕರಣಗಳಾಗಿದ್ದು ಇದಕ್ಕೆ ಮೈಸೂರಿನ ಬಿಇಓ ಕಚೇರಿ ಯ ಟ್ರ್ಯಾಪ್ ತಾಜಾ ಉದಾಹರಣೆ

ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ಬಿಇಒ ಕಚೇರಿ ಮೇಲೆ ಎಸಿಬಿ ರೇಡ್ ಆಗಿದೆ.ಬಿಇಒ ಚಂದ್ರಕಾಂತ್,ಸೂಪರಿಂ ಡೆಂಟ್ ಶಂಕರ್ ರನ್ನು ಎಸಿಬಿ ಅಧಿಕಾರಿಗಳು ಈಗಾಗಲೇ ವಶಕ್ಕೆ ಪಡೆದಿದ್ದು.ಇನ್ನೂ ದ್ವಿತೀಯ ದರ್ಜೆ ಸಹಾಯಕ ರವಿ ಸೇರಿದಂತೆ ಮೂವರ ವಿರುದ್ದ ತನಿಖೆ ಆರಂಭವಾಗಿದೆ. ನಿವೃತ್ತ ಶಿಕ್ಷಕರೊಬ್ಬರಿಗೆ ಪಿಂಚಣಿ ವಿಚಾರದಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇವರು ಈಗಾಗಲೇ ಟ್ರ್ಯಾಪ್ ಆಗಿದ್ದಾರೆ ಇತ್ತ ದಾಳಿ ನಡೆಸಿರಜವ ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ನಿವೃತ್ತ ವಿಕಲ ಚೇತನ ಶಿಕ್ಷಕರಿಂದ ಅಧಿಕಾರಿಗಳು 9 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರು.ಶಿಕ್ಷಕನ ಫೆನ್ಷನ್ ಸೇರಿ ಸೇವಾ ಅವಧಿಯ ಸವಲತ್ತು ಪಡೆಯುವ ದಾಖಲಾತಿ ಹಿರಿಯ ಅಧಿಕಾರಿಗಳಿಗೆ ಕಳಿಸಲು ಹಣದ ಬೇಡಿಕೆ ಇಟ್ಟಿದ್ದರು. 7 ಸಾವಿರ ಲಂಚದ ಹಣ ಸ್ವೀಕರಿಸುವಾಗ ಎಸಿಬಿ ರೇಡ್ ಮಾಡಿದ್ದಾರೆ.ಇನ್ನೂ ಮುಖ್ಯವಾಗಿ ಸರ್ಕಾರದ ಕೆಲಸ ದೇವರ ಕೆಲಸ ಎಂದುಕೊಂಡು ಸರ್ಕಾರ ದಿಂದ ಕೈ ತುಂಬಾ ಸಂಬಳ ಬರುತ್ತಿದ್ದರು ಕೂಡಾ ಲಂಚಕ್ಕೆ ಕೈ ಚಾಚಿ ಈಗ ಎಸಿಬಿ ಬಲೆಗೆ ಬಿದ್ದು ಒದ್ದಾಡುತ್ತಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.