ಬೆಂಗಳೂರು –
ರಾಜ್ಯದ ಸರ್ಕಾರಿ ಶಾಲೆಗಳ ಅಭಿವೃದ್ದಿಗಾಗಿ 100 ರೂಪಾಯಿ ದೇಣಿಗೆ ಸಂಗ್ರಹಿಸುವ ವಿಚಾರ ಕುರಿ ತಂತೆ ನಿನ್ನೆ ಹೊರಡಿಸಲಾಗಿದ್ದ ಆದೇಶವನ್ನು ಏಕಾಎಕಿಯಾಗಿ ರಾಜ್ಯ ಸರ್ಕಾರ ಹಿಂದೆ ಪಡೆದಿದೆ ಹೌದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯು ಕ್ತರು ಎಸ್ ಡಿ ಎಂ ಸಿಗೆ ಶಾಲೆಗಳ ಶ್ರೇಯೋಭಿವೃ ದ್ಧಿಗಾಗಿ 100 ರೂ ದೇಣಿಗೆ ಸಂಗ್ರಹಕ್ಕೆ ಅನುಮತಿ ನೀಡಿ ಸುತ್ತೋಲೆ ಹೊರಡಿಸಿದ್ದರು ಆದೇಶದ ಬೆನ್ನಲ್ಲೇ ರಾಜ್ಯಾಧ್ಯಂತ ಸಾಕಷ್ಟು ಪ್ರಮಾಣದಲ್ಲಿ ಅಸಮಾಧಾನ ವ್ಯಕ್ತವಾಗಿತ್ತು ಹೀಗಾಗಿ ಈ ಒಂದು ವಿವಾದದ ಆದೇಶವನ್ನು ರಾಜ್ಯ ಸರ್ಕಾರ ತರಾ ತುರಿಯಲ್ಲಿ ಹಿಂದೆ ಪಡೆದಿದೆ.
ಆದೇಶದ ನಂತರ ರಾಜ್ಯ ಸರ್ಕಾರದ ದಿವಾಳಿ ತನವನ್ನು ಎತ್ತಿ ತೋರಿಸುತ್ತಿದೆ ಎಂಬುದಾಗಿ ವಿಪಕ್ಷಗಳ ನಾಯಕರು ಗುಡುಗಿದ್ದರು ಅಲ್ಲದೇ ಈ ಕುರಿತಂತೆ ರಾಜ್ಯದ ಹಲವೆಡೆ ಸಾರ್ವಜನಿಕರು ಕೂಡಾ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು ಹೀಗಾಗಿ ಈ ಬೆನ್ನಲ್ಲೇ ಶಿಕ್ಷಣ ಇಲಾಖೆಯಿಂದ 100 ರೂ ದೇಣಿಗೆ ಸಂಗ್ರಹದ ಸುತ್ತೊಲೆಯನ್ನು ಹಿಂಪ ಡೆಯಲಾಗಿದೆ.ಈ ಕುರಿತಂತೆ ಆದೇಶ ಹೊರಡಿಸಿ ರುವಂತ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು, ಶಿಕ್ಷಣ ಸಚಿವರ ಸೂಚನೆಯ ಮೇರೆಗೆ, 100 ರೂ ದೇಣಿಗೆ ಸಂಗ್ರಹದ ಸುತ್ತೋಲೆಯನ್ನು ಹಿಂಪಡೆಯಲಾಗಿದೆ ಎಂಬುದಾಗಿ ತಿಳಿಸಿದ್ದಾರೆ.
ಇನ್ನೂ ಈ ಒಂದು ವಿಚಾರ ಕುರಿತಂತೆ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಮಾತನಾಡಿ ಶಿಕ್ಷಣ ಇಲಾಖೆಯ ಈ ಒಂದು ಸುತ್ತೋಲೆಗೂ ಸಿಎಂ, ಶಿಕ್ಷಣ ಸಚಿವ’ರಿಗೂ ಸಂಬಂಧವಿಲ್ಲ ರಾಜ್ಯ ಸರ್ಕಾರದ ಬಗ್ಗೆ ಪದೇ ಪದೇ ದೂರುವುದು ಸರಿಯಲ್ಲ ಕೆಲವೊಂದು ಸುತ್ತೋಲೆಗಳು ಸರ್ಕಾರದ ಗಮನಕ್ಕೆ ಬರುವುದಿಲ್ಲ 100 ರೂ ಸಂಗ್ರಹ ಸಂಬಂಧ ಹೊರಡಿಸಿರುವಂತ ಸುತ್ತೋಲೆ ಶಿಕ್ಷಣ ಇಲಾಖೆಯಿಂದ ಹೊರಡಿಸಿ ರೋದಾಗಿದೆ.ಇದಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸ್ಪಷ್ಟ ಪಡಿಸಿದ್ದಾರೆ.ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಶಾಲಾ ಶ್ರೇಯೋಭಿವೃದ್ಧಿಗಾಗಿ 100 ರೂ ಸಂಗ್ರಹಿಸೋದಕ್ಕೆ ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ ಈ ಸುತ್ತೋಲೆಗೂ ಶಿಕ್ಷಣ ಸಚಿವರು, ಸಿಎಂಗೂ ಯಾವುದೇ ಸಂಬಂಧವಿಲ್ಲ ಎಂಬುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಕೆಲವರು ಸರಿಯಾಗಿ ಓದಿಕೊಳ್ಳದೇ ಪ್ರತಿಕ್ರಿಯೆ ನೀಡಿದ್ದಾರೆ. ಎಸ್ ಡಿ ಎಂಸಿಗಳ ಸಲಹೆ ಮೇರೆಗೆ ಸುತ್ತೋಲೆ ಹೊರಡಿಸಲಾಗಿದೆ. ಎಲ್ಲಾ ಸುತ್ತೋಲೆಗಳನ್ನು ಸರ್ಕಾರದ ಗಮನಕ್ಕೆ ತಂದು ಹೊರಡಿಸಬೇಕಿಲ್ಲ. ಹಣ ಸಂಗ್ರಹಿಸಲು ಆರ್ ಟಿಇ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.ಇನ್ನೂ ಮುಂದುವರೆದು ಮಾತನಾಡಿ ದಂತ ಅವರು, ಆರ್ ಟಿಇ ಒಳ್ಳೆಯ ಕಾಯ್ದೆಯಾ ಗಿದೆ. ಅದನ್ನು ಜಾರಿಗೆ ತಂದಿದ್ದು ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಆಗಿದೆ. ಪೋಷಕರು ಕಡ್ಡಾಯವಾಗಿ ಶಾಲಾ ಶ್ರೇಯೋಭಿ ವೃದ್ಧಿಗೆ ಹಣ ಕೊಡಬೇಕು ಎಂದು ಎಲ್ಲಿಯೂ ಹೇಳಿಲ್ಲ.
ಅವರಾಗಿಯೇ ತಿಂಗಳಿಗೆ ರೂ.100 ಕೊಟ್ಟರೇ ರಸೀದಿ ಕೊಡಬೇಕು ಇದರಲ್ಲೂ ಸಿದ್ಧರಾಮಯ್ಯ ರಾಜಕೀಯ ಮಾಡುವುದು ಸರಿಯಲ್ಲ ಎಂದು ವಾಗ್ಧಾಳಿ ನಡೆಸಿದರು.ಶಿಕ್ಷಣ ಇಲಾಖೆಯಿಂದ ಶಾಲಾ ಶ್ರೇಯೋಭಿವೃದ್ಧಿಗೆ ಎಸ್ ಡಿಎಂಸಿಯಿಂದ 100 ರೂ ಸಂಗ್ರಹಿಸಲು ಹೊರಡಿಸಲಾಗಿರುವಂತ ಕ್ರಮದಲ್ಲಿ, ಹಣ ದುರುಪಯೋಗ ಆದರೇ ಸುತ್ತೋಲೆಯನ್ನ ಹಿಂಪಡೆಯಲಾಗುತ್ತದೆ ಎಂಬುದಾಗಿ ತಿಳಿಸಿದರು.ಈ ಬೆನ್ನಲ್ಲೇ ಇದೀಗ ಶಿಕ್ಷಣ ಇಲಾಖೆಯಿಂದ ಶಾಲೆಗಳ ಶ್ರೇಯೋ ಭಿವೃದ್ಧಿಗಾಗಿ 100 ರೂ ದೇಣಿಗೆ ಸಂಗ್ರಹಿಸೋ ದಕ್ಕಾಗಿ ಎಸ್ ಡಿಎಂಸಿಗಳಿಗೆ ಅನುಮತಿಸಿ ಹೊರಡಿಸಿದ್ದಂತ ಆದೇಶವನ್ನು ವಾಪಾಸ್ ಪಡೆದಿದೆ.
ಈ ಮೂಲಕ ಪೋಷಕರು, ಸಾರ್ವಜನಿಕರ ಒತ್ತಡಕ್ಕೆ ಮಣಿದು, ದೇಣಿಗೆ ಸಂಗ್ರಹ ಸುತ್ತೊಲೆ ಯನ್ನು ಹಿಂದೆ ಪಡೆದಿದ್ದು ಈ ಕುರಿತಂತೆ ರಾಜ್ಯ ದಲ್ಲಿ ಸರ್ಕಾರಿ ನೌಕರರ ಶಿಕ್ಷಕರ ಧ್ವನಿಯಾಗಿ ಕೆಲಸವನ್ನು ಮಾಡುತ್ತಿರುವ ಸುದ್ದಿ ಸಂತೆ ಸಂತೆ ನ್ಯೂಸ್ ಈ ಕುರಿತಂತೆ ವರದಿಯನ್ನು ಪ್ರಕಟ ಮಾಡಿತ್ತು ಇದೇಲ್ಲದರ ನಡುವೆ ಈಗ ಆದೇಶವನ್ನು ಹಿಂದೆ ಪಡೆದಿದೆ.