ಬೆಂಗಳೂರು –
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಹೊಸದಾಗಿ ನಿರ್ಮಾಣ ವಾಗುತ್ತಿರುವ 8,100 ಹೊಸ ಕೊಠಡಿ ಗಳಿಗೆ ವಿವೇಕ ಎಂಬ ಹೆಸರಿಡಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರ್ಧರಿಸಿದೆ. ಕಾಮ ಗಾರಿ ಪೂರ್ಣಗೊಂಡ ನಂತರ ಎಲ್ಲಾ ಕೊಠಡಿ ಗಳಿಗೂ ಸ್ವಾಮಿ ವಿವೇಕಾನಂದರ ಸ್ಮರಣಾರ್ಥ ವಿವೇಕ ಎಂದು ಹೆಸರಿಡಲು ಹಾಗೂ ವಿವೇಕಾ ನಂದರ ಪರಿಕಲ್ಪನೆಗೆ ಪೂರಕವಾದ ಏಕ ರೂಪದ ಬಣ್ಣ, ಅವರ ಭಾವಚಿತ್ರ ತತ್ವ, ಸಂದೇಶಗಳನ್ನು ಬರೆಸಲು ಆಲೋಚನೆ ನಡೆದಿದೆ
ವಿವೇಕ ಎಂದರೆ ಜ್ಞಾನವೂ ಹೌದು ಗೋಡೆಗಳಿಗೆ ಬಳಿಯುವ ಬಣ್ಣದ ಆಯ್ಕೆ ಕುರಿತು ಇನ್ನೂ ಚರ್ಚಿ ಸಿಲ್ಲ ಎಂದು ಸಚಿವ ಬಿ.ಸಿ.ನಾಗೇಶ್ ಪ್ರತಿಕ್ರಿಯಿ ಸಿದರು.ಇದರೊಂದಿಗೆ ರಾಜ್ಯದ ಸರ್ಕಾರಿ ಶಾಲೆ ಗಳಲ್ಲಿ ಮತ್ತೊಂದು ಬದಲಾವಣೆ ಗೆ ಮುಂದಾ ಗಿದ್ದಾರೆ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ಶೀಘ್ರದಲ್ಲೇ ಈ ಯೋಜನೆ ಶಾಲೆಗಳಲ್ಲಿ ಆರಂಭ ಮಾಡಲಾಗುತ್ತದೆ ಎಂದು ಹೇಳಿದರು.
ವರದಿ – ಶ್ರೀಗೌರಿ ಸುದ್ದಿ ಸಂತೆ ನ್ಯೂಸ್